- Advertisement -
- Advertisement -
ವಿಟ್ಲ: ನಾಳೆ (ಡಿ.25) ಪೂರ್ವಾಹ್ನ ಗಂಟೆ 11:00ಕ್ಕೆ ಸರಿಯಾಗಿ ಅಕ್ಷಯದಲ್ಲಿ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ(ರಿ) ಶಾಂತಿನಗರ ಇದರ ವಾರ್ಷಿಕ ಮಹಾಸಭೆ, ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ಪ್ರತಿಭಾ ಪುರಸ್ಕಾರ ಜರಗಲಿದೆ.
ಬೆಳಗ್ಗೆ ಗಂಟೆ 7.00ಕ್ಕೆ ಗಣಹೋಮ ನಡೆದು, 8ಕ್ಕೆ ಶ್ರೀ ಸತ್ಯನಾರಾಯಣ ದೇವರ ಪೂಜೆ ಆರಂಭವಾಗಲಿದೆ. 10.30ಕ್ಕೆ ಮಹಾಮಂಗಳಾರತಿ ನಡೆಯಲಿದೆ. ಪೂಜೆ ಮಾಡಿಸುವವರಿಗೆ ಅವಕಾಶವಿದೆ. ಪೂಜೆಗೆ ರೂ. 100
ತಾವೆಲ್ಲರೂ ಇದರಲ್ಲಿ ಪಾಲ್ಗೊಂಡು ಈ ಸಮುದಾಯದ ಅಭ್ಯುದಯದ ಬಗ್ಗೆ ಸೂಕ್ತ ಸಲಹೆ ಸೂಚನೆ ನೀಡುವುದರೊಂದಿಗೆ ತನ್ನ ನೆರೆಹೊರೆಯಲ್ಲಿರುವ ಸದಸ್ಯರಾಗದ ಸ್ವಜಾತಿ ಬಂಧುಗಳನ್ನು ಕೂಡಾ ಕರೆದುಕೊಂಡು ಬಂದು ಸಂಘದ ಅಭಿವೃದ್ಧಿಗೆ ಬೇಕಾದ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಬೇಕಾಗಿ ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -