ವಿಟ್ಲ: ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡ ನೇತೃತ್ವದಲ್ಲಿ ಇಂದು ದತ್ತ ಪೀಠ ಹೋರಾಟದ ಗೆಲುವಿನ ವಿಜಯೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಿಟ್ಲ ಪ್ರಖಂಡದ ಕಾರ್ಯದರ್ಶಿ ಚರಣ್ ಕಾಪುಮಜಲು ರವರು ದತ್ತ ಪೀಠದ ಹೈಕೋರ್ಟ್ ನ ತೀರ್ಮಾನವನ್ನು ಪ್ರಶಂಶಿಸಿದರು. ರಾಷ್ಟೀಯ ಸ್ವಯಂ ಸೇವಕ ಸಂಘ ವಿಟ್ಲ ಮಂಡಲದ ಸಹಾಕಾರ್ಯವಹರು ಆದಂತಹ ವಿನೋದ್ ಶೃಂಗೇರಿಯವರು ಮಾತನಾಡಿ ದತ್ತ ಪೀಠದ ಹೋರಾಟದಲ್ಲಿ ವಿ. ಹಿಂ. ಪ ಬಜರಂಗದಳದವರು ಮಾಡಿದ ಹೋರಾಟದ ಚರಿತ್ರೆಯನ್ನು ಎಲ್ಲರಿಗೂ ತಿಳಿಸಿದರು.
ಈ ವೇಳೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ ಸಿಹಿ ತಿಂಡಿ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್ ನ ಜತ್ತಪ್ಪ ವಿಟ್ಲ, ಬಜರಂಗದಳದ ಜಿಲ್ಲಾ ಸಹಸಂಚಾಲಕರಾದಂತಹ ಚಂದ್ರಹಾಸ ಕನ್ಯಾನ ಹಾಗೂ ಭಾರತೀಯ ಜನತಾ ಪಾರ್ಟಿ ವಿಟ್ಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಅರುಣ್ ಎಂ ವಿಟ್ಲ, ಜಯಂತ್ ಸಿ ಎಚ್ ಉಪಸ್ಥಿತರಿದ್ದರು.
ಸದಾ ಕಾಶಿಮಠ, ಉದಯ ಆಲಂಗಾರ್, ವಿಟ್ಲ ಮಜದ್ದೂರ್ ಸಂಘ ಅಧ್ಯಕ್ಷರಾದ ರಾಜೇಶ್, ಪಟ್ಟಣ ಪಂಚಾಯತ್ ಸದಸ್ಯರಾದ ಶ್ರೀಕೃಷ್ಣ ವಿಟ್ಲ ಹಾಗೂ ಹರೀಶ್ ವಿಟ್ಲ, ಜಗದೀಶ್ ಪಾಣೆಮಜಲು, ಸುರೇಶ್ ಶಿವಾಜಿನಗರ, ಪುನೀತ್, ಶಿಶಿರ್ ಗೌಡ, ವಿನಯ, ಚರಣ್ ಜೋಗಿ ಕಾಪುಮಜಲು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.