Wednesday, April 24, 2024
spot_imgspot_img
spot_imgspot_img

ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬದಲ್ಲಿ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

- Advertisement -G L Acharya panikkar
- Advertisement -

ದೇಶಾಭಿಮಾನವು ಮಕ್ಕಳಲ್ಲಿ ಎಳೆಯ ವಯಸ್ಸನಲ್ಲಿ ಬೆಳೆಯಬೇಕು ಯುವ ಜನಾಂಗವು ಉಚಿತ ಶಿಕ್ಷಣದೊದಿಗೆ ದೇಶದ ಅಭಿವೃದ್ದಿಯಲ್ಲಿ ತೊಡಗಿ ಕೊಂಡಾಗ ಸರ್ವಜನಾಂಗದ ಶಾಂತಿಯತೋಟದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಶ್ರೀ ಮಾತಾ ಡೆವಲಪ್ಪರ್ಸನ ಮಾಲಿಕರೂ ಮಜಿ ಶಾಲಾ ದತ್ತು ಸಮಿತಿಯ ಅಧ್ಯಕ್ಷರಾದ ಶ್ರೀಯುತ ಸಂತೋಷ್ ಕುಮಾರ್ ಶೆಟ್ಟಿಯವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ 75 ನೇ ವಷ೯ದ ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಸಂಜೀವ ಪೂಜಾರಿಯವರು ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣದ ಬಳಿಕ ಭಾರತಮಾತೆಯ ಜೊತೆಗೆ ರಾಷ್ಟ್ರನಾಯಕರ ವೇಷ ಭೂಷಣಗಳನ್ನು ತೊಟ್ಟು ವಿಧ್ಯಾರ್ಥಿಗಳಿಂದ ವೀರಕಂಬ ಗ್ರಾಮ ಪಂಚಾಯತಿನ ತನಕ ಪ್ರಭಾತಭೇರಿ ನೆರವೇರಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ದೇಶದ ಉನ್ನತಿಯಲ್ಲಿ ಯುವಜನಾಂಗದ ಪಾತ್ರ ಮಹತ್ತರವಾದುದು ದುಶ್ಚಟಗಳಿಗೆ ದಾಸರಾಗದೇ ಅಗ್ನಿಪಥ್ ನಂತಹ ಯೋಜನೆಗಳಲ್ಲಿ ತೊಡಗಿಕೊಳ್ಳಬೇಕು ಭಾರತದ ಜನಸಂಖ್ಯೆಯು ಅತಿಹೆಚ್ಚಿನ ದಾಗಿದ್ದು ಇದನ್ನು ಸಂಪನ್ಮೂಲವಾಗಿ ಬಳಸಿಕೊಂಡಾಗ ಯಾವುದೇ ರೀತಿಯ ತೊಡಕು ಉಂಟಾಗಲಾರದು ಎಂದು ಕೆಎಂ.ಎಫ್. ವಿಸ್ತರಣಾಧಿಕಾರಿ ಶ್ರೀ ಜಗದೀಶ್ ಮಜಿ ತಿಳಿಸಿದರು.

ಮುಖ್ಯ ಅಥಿತಿಯವರಾದ ವೀರಕಂಭ ಗ್ರಮ ಪಂಚಾಯತಿ ಯ ಅಧ್ಯಕ್ಷರಾದ ಶ್ರೀ ದಿನೇಶ್ ರವರು ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದಭ೯ದಲ್ಲಿ ಘರ್ ಘರ್ ತಿರಂಗಾದ ಮೂಲಕ ಪ್ರತಿಮನೆಯಲ್ಲೂ ಮೂರುದಿನಗಳಿಂದ ನಡೆಸಲಾದ ಸ್ವಾತಂತ್ರದಿನಾಚರಣೆಯ ಬಗ್ಗೆ ತಿಳಿಸಿದರು.
ನೃತ್ಯ, ಭಾಷಣ, ಹಾಡುಗಳ ಮೂಲಕ ಮಕ್ಕಳಲ್ಲಿ ದೇಶಾಭಿಮಾನವನ್ನು ಮೂಡಿಸಿದಾಗ ಮಕ್ಕಳ ಮನಸ್ಸು ಚಂಚಲತೆಗೆ ಒಳಗಾಗದೇ ದೇಶದ ಅಸ್ತ್ರಗಳಾಗುತ್ತಾರೆ ಎಂದು ಮಜಿಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಕಾಯ೯ದಶಿ೯ಯವರಾದ ಶ್ರೀ ವಿಶ್ವನಾಥರವರು ಕಾಯ೯ಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಮಜಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀ ಸಂಜೀವ ಯೂಲ್ಯ ರವರು ವಹಿಸಿದ್ದರು. ಶಾಲಾ ಮಕ್ಕಳು ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಸ್ವಾತಂತ್ರ್ಯೋತ್ಸವದ ಬಗ್ಗೆ ಭಾಷಣ ಮಾಡಿದರು. ವೇದಿಕೆಯಲ್ಲಿ ಮಾತೃಶ್ರೀ ಗೆಳೆಯರ ಬಳಗದ ಅಧ್ಯಕ್ಷ ಸುಧಾಕರ ಮೈರಾ ,ಗ್ರಾಮ ಪಂಚಾಯತ್ ಸದಸ್ಯರಾದ ಜಯಂತಿ ಜನಾರ್ಧನ್, ಸುನಿಲ್ ಮೀನಾಕ್ಷಿ, ಅನಂತಾಡಿ ಬಂಟ್ರಿಂಜ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಸುಂದರಿ ಟೀಚರ್ ಉಪಸ್ಥಿತರಿದ್ದರು.
ಮಖ್ಯ ಶಿಕ್ಷಕ ನಾರಾಯಣ ಪೂಜಾರಿಯವರು ಸ್ವಾಗತಿಸಿ ಶಿಕ್ಷಕಿ ಮುರ್ಷಿದಾರವರು ಸ್ವಾತಂತ್ರದ ಅಮೃತಮಹೋತ್ಸವದ ಸಂದರ್ಭಕ್ಕಾಗಿ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ಪಟ್ಟಿ ವಾಚಿಸಿದರು.

ಶಿಕ್ಷಕಿ ಜಯಲಕ್ಷ್ಮೀ ಸಾಂಸ್ಕ್ರತಿಕ ಕಾಯ೯ಕ್ರಮ ನೆರವೇರಿಸಿ, ಶಿಕ್ಷಕಿ ಅನುಷಾರವರು ವಂದಿಸಿದರು. ಶಿಕ್ಷಕಿ ಸಂಗೀತ ಶಮ೯ರವರು ಕಾಯ೯ಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರುಗಳು, ಮಕ್ಕಳ ಪೋಷಕರು ಉಪಸ್ಥಿತರಿದ್ದರು, ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

- Advertisement -

Related news

error: Content is protected !!