- Advertisement -
- Advertisement -
ನಟೋರಿಯಸ್ ರೌಡಿಶೀಟರ್ನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕುರುವಂಗಿ ಗ್ರಾಮದಲ್ಲಿ ನಡೆದಿದೆ. ಸಂತೋಷ್ ಅಲಿಯಾಸ್ ಪುಲ್ಲಿ (36) ಮೃತ ಪಟ್ಟ ದುರ್ದೈವಿ. ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರೀತಮ್, ಕೀರ್ತಿ ಬಂಧಿತ ಆರೋಪಿಗಳು.
ಫೆ.9 ರಂದು ಸಂತೋಷ್ ಕಾಣಿಯಾಗಿದ್ದನು. ಹೀಗಾಗಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಆತನ ಮೇಲೆ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿತ್ತು. ನಂತರ ಸಂತೋಷ್ ಅಲಿಯಾಸ್ ಪುಲ್ಲಿ (36) ದುಷ್ಕರ್ಮಿಗಳಿಂದ ಹತ್ಯೆ ಮಾಡಿ ಮೃತದೇಹವನ್ನು ಹೂತು ಹಾಕಿದ ಸ್ದಿತಿಯಲ್ಲಿ ಅರಣ್ಯದಲ್ಲಿ ಸಿಕ್ಕಿದೆ.
ಈ ಸಂಬಂಧ ಇಬ್ಬರು ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಸಂತೋಷ್ ಶವ ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಚಿಕ್ಕಮಗಳೂರು ಅರಣ್ಯದಲ್ಲೇ ಅಂತ್ಯಸಂಸ್ಕಾರ ನಡೆಸಿದ್ದಾರೆ.
- Advertisement -