- Advertisement -
- Advertisement -
ನಾಯಿಗಳ ದಾಳಿಯಿಂದ ಕೃಷ್ಣಮೃಗ ಸಾವನ್ನಪ್ಪಿದ ಘಟನೆ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಬುಕ್ಕಂಬೂದಿ ಗ್ರಾಮದ ಸಸಿಮರ ಕಾವಲು ಬಳಿ ನಡೆದಿದೆ.
ಸಸಿಮರ ಕಾವಲು ಅರಣ್ಯದಿಂದ ಬಂದ ಕೃಷ್ಣಮೃಗದ ಮೇಲೆ ನಾಯಿಗಳ ದಂಡು ದಾಳಿ ಮಾಡಿದೆ. ಈ ವಿಚಾರ ತಿಳಿದ ಬಳಿಕ ಸ್ಥಳೀಯ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕೃಷ್ಣಮೃಗವನ್ನು ರಕ್ಷಿಸಿದರು.
ನಾಯಿಗಳ ದಾಳಿಗೆ ಗಾಯಗೊಂಡಿದ್ದ ಕೃಷ್ಣ ಮೃಗಕ್ಕೆ ಅರಣ್ಯ ಇಲಾಖೆಯಿಂದ ಪಶು ಇಲಾಖೆಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣಮೃಗವು ಹೃದಯಾಘಾತದಿಂದ ಸಾವನ್ನಪ್ಪಿದೆ.
- Advertisement -