Tuesday, April 30, 2024
spot_imgspot_img
spot_imgspot_img

ನಾಳೆ ಕೆಂಪುಕೋಟೆಯಲ್ಲಿ ಧ್ವಜಾರೋಹಣದ ಬಳಿಕ ಇದೆ ಒಂದು ವಿಶೇಷತೆ; 2 ಹೆಲಿಕಾಪ್ಟರ್​ಗಳು ಸಿದ್ಧ

- Advertisement -G L Acharya panikkar
- Advertisement -

ನಾಳೆ ಭಾರತದ ಪಾಲಿಗೆ ವಿಶೇಷ ದಿನ. 75ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಮುಂಜಾನೆ ಪ್ರಧಾನಮಂತ್ರಿ ಮೋದಿಯವರು, ಐತಿಹಾಸಿಕ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸಲಿದ್ದಾರೆ. ಬಳಿಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇವಿಷ್ಟು ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದ ದಿನದಂದು ನಡೆಯುತ್ತದೆ. ಆದರೆ ಈ ಬಾರಿ ಧ್ವಜಾರೋಹಣದ ಸಂದರ್ಭದಲ್ಲಿ ವಿಶೇಷತೆಯೊಂದು ಇದೆ. ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿಯವರು ಧ್ವಜಾರೋಹಣ ಮಾಡುತ್ತಿದ್ದಂತೆ ಸ್ಥಳದಲ್ಲಿ ಹೂವಿನ ಎಸಳುಗಳ ಸುರಿಮಳೆಯಾಗಲಿದೆ.

ಈ ಬಾರಿ ಭಾರತ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಸಂಭ್ರಮದಲ್ಲಿದೆ. ಹೀಗೆ ಅಪಾರ ಪ್ರಮಾಣದಲ್ಲಿ ಹೂವಿನ ಎಸಳುಗಳನ್ನು ಮೇಲಿನಿಂದ ಉದಿರಿಸಲು ಎರಡು ಹೆಲಿಕಾಪ್ಟರ್​​ಗಳು ರೆಡಿಯಾಗಿವೆ. ರಾಷ್ಟ್ರ ಧ್ವಜಾರೋಹಣ ಆಗುತ್ತಿದ್ದಂತೆ ಭಾರತೀಯ ವಾಯುಸೇನೆಯ ಎಂಐ-17 1ವಿ (Mi-17 1V) ಎರಡು ಹೆಲಿಕಾಪ್ಟರ್​​ಗಳು ಹೂವಿನ ಎಸಳುಗಳ ಸುರಿಮಳೆ ಸುರಿಸಲಿವೆ. ಇದರಲ್ಲಿ ಮೊದಲನೇ ಹೆಲಿಕಾಪ್ಟರ್​​ನ ಕಮಾಂಡರ್​ ಬಲ್​ದೇವ್​ ಸಿಂಗ್​ ಬಿಶತ್​ ಆಗಿದ್ದು ಎರಡನೇ ಹೆಲಿಕಾಪ್ಟರ್​ನ ಕ್ಯಾಪ್ಟನ್​ ವಿಂಗ್​ ಕಮಾಂಡರ್​ ನಿಖಿಲ್​ ಮೆಹ್ರೋತ್ರಾ.

ರಾಷ್ಟ್ರ ಧ್ವಜಾರೋಹಣವಾಗುತ್ತಿದ್ದಂತೆ ಇವೆರಡೂ ಹೆಲಿಕಾಪ್ಟರ್​ಗಳಿಂದ ಹೂವಿನ ಸಿಂಪಡಣೆ ಆಗಲಿದ್ದು, ನಂತರ ಪ್ರಧಾನ ಮಂತ್ರಿ ದೇಶವನ್ನುದ್ದೇಶಿಸಿ ಮಾತನಾಡುವರು. ಭಾಷಣದ ಬಳಿಕ ನ್ಯಾಷನಲ್​ ಕೆಡೆಟ್ಸ್​ ಕಾರ್ಪ್ಸ್(NCC)​ ರಾಷ್ಟ್ರಗೀತೆ ಹಾಡಲಿದೆ. ಭೂ, ನೌಕಾ ಮತ್ತು ವಾಯುಸೇನೆಯ ವಿವಿಧ ಶಾಲೆಗಳಿಂದ ಒಟ್ಟು 500 ಕೆಡೆಟ್​ಗಳು ಈ ಹೊತ್ತಲ್ಲಿ ಪಾಲ್ಗೊಳ್ಳಲಿವೆ.

ಒಲಿಂಪಿಕ್ಸ್​ ಅಥ್ಲೀಟ್​ಗಳು ಭಾಗಿಇನ್ನು ಈ ಬಾರಿ ಒಲಿಂಪಿಕ್ಸ್​ನಲ್ಲಿ ಭಾರತ ಅಮೋಘ ಸಾಧನೆ ಮಾಡಿದ್ದು, ಅದರಲ್ಲಿ ಪಾಲ್ಗೊಂಡ ಆಟಗಾರರನ್ನು ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವಕ್ಕೆ ಆಹ್ವಾನಿಸಲಾಗಿದೆ. ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ ಸೇರಿ 32 ಅಥ್ಲೀಟ್​ಗಳು ಪಾಲ್ಗೊಳ್ಳುವರು.

ಕೆಂಪುಕೋಟೆಯಲ್ಲಿ ಬಿಗಿ ಭದ್ರತೆ75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಕೆಂಪುಕೋಟೆಯಲ್ಲಿ ಬಿಗಿ ಭದ್ರತೆ ಮಾಡಲಾಗಿದೆ. ಎನ್​ಎಸ್​ಜಿ ಸ್ನಿಪರ್​ಗಳು ಸೇರಿ, ವಿವಿಧ ಭದ್ರತಾ ಪಡೆಗಳ ಕಮಾಂಡೋಗಳನ್ನು ನೇಮಿಸಲಾಗಿದೆ. ಭಾರಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ.

driving
- Advertisement -

Related news

error: Content is protected !!