Tuesday, May 21, 2024
spot_imgspot_img
spot_imgspot_img

ನಿಧಿ ಆಸೆಗಾಗಿ ಬಾಲಕನನ್ನು ಅಪಹರಿಸಿ ನರಬಲಿ…! ಬಾಲಾಪರಾಧಿಗಳು ಅರೆಸ್ಟ್‌

- Advertisement -G L Acharya panikkar
- Advertisement -
vtv vitla

ನಿಧಿ ಆಸೆಗಾಗಿ ಇಬ್ಬರು ಬಾಲಾಪರಾಧಿಗಳು, ಮನೆಯ ಮುಂದೆ ಆಡುತ್ತಿದ್ದ 9 ವರ್ಷದ ಬಾಲಕನನ್ನು ಕಿಡ್ನ್ಯಾಪ್ ಮಾಡಿ, ಕೊಲೆ ಮಾಡಿದ್ದ ಪ್ರಕರಣ ಗುಜರಾತ್‌ನ ದಾದಾ ಬಳಿಯಲ್ಲಿ ನಡೆದಿದೆ.

9 ವರ್ಷದ ಬಾಲಕನನ್ನು ಕಿಡ್ನ್ಯಾಪ್ ಮಾಡಿದ ನಂತರ ಆ ಬಾಲಕನನ್ನ ಕೊಲೆ ಮಾಡಿ ಪೀಸ್ ಪೀಸ್ ಮಾಡಿದ್ದಾರೆ. ಈಗ ಅದೇ ಬಾಲಕನ ಶವ ಗುಜರಾತ್ ರಾಜ್ಯದ ವಲ್ಸಾದ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ದಮಗಂಗಾ ಕಾಲುವೆಯಲ್ಲಿ ಪತ್ತೆಯಾಗಿದೆ. ತಕ್ಷಣವೇ ತನಿಖೆ ಆರಂಭಿಸಿದ ಪೊಲೀಸರು ಬುಡಕಟ್ಟು ಸಮುದಾಯದಕ್ಕೆ ಸೇರಿದ ಬಾಲಕನ ತಲೆ ಇಲ್ಲದ ಶವವನ್ನ ಪೋಸ್ಟ್ ಮಾರ್ಟ್‌೦ಗೆ ಕಳುಹಿಸಿ ಇಬ್ಬರು ಬಾಲಕರನ್ನ ಬಂಧಿಸಿದ್ದಾರೆ.

ದಾದ್ರಾ ಮತ್ತು ನಗರ ಹವೇಲಿ ಜಿಲ್ಲೆಯ ಸಯಾಲಿ ಗ್ರಾಮದಿಂದ ಬಾಲಕ ಡಿಸೆಂಬರ್ 29ರಿಂದ ನಾಪತ್ತೆಯಾಗಿದ್ದನು. ಈ ಕುರಿತು ಸಿಲ್ವಾಸ್ಸಾ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು. ಬಾಲಕನನ್ನು ಎಷ್ಟೇ ಹುಡುಕಿದರೂ ಆತ ಸಿಕ್ಕಿರಲಿಲ್ಲ. ಕೊನೆಗೆ ಸಿಲ್ವಾಸ್ಸಾದಿಂದ 30 ಕಿಮೀ ದೂರದಲ್ಲಿರುವ ತಲೆ ಇಲ್ಲದ ದೇಹವೊಂದು ಪತ್ತೆಯಾಗಿದೆ. ಅಲ್ಲೇ ಪಕ್ಕದಲ್ಲೇ ಇದ್ದ ಕಾಲುವೆಯಲ್ಲಿ ಶವದ ಇತರೇ ಭಾಗಗಳು ಕೂಡ ಪತ್ತೆಯಾಗಿದ್ದವು. ಸೂಕ್ಷ್ಮವಾಗಿ ಗಮನಿಸಿದಾಗ ಅಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆದಿರುವ ಕುರುಹುಗಳು ಸಿಕ್ಕಿದ್ದವು.

ನಿಧಿ ಆಸೆಗಾಗಿ ಬಾಲಾಪರಾಧಿಯಿಬ್ಬರು 9 ವರ್ಷದ ಮಗುವನ್ನು ಡಿಸೆಂಬರ್ 29ರಂದು ಸಾಯಿಲಿ ಗ್ರಾಮದಿಂದ ಅಪಹರಣ ಮಾಡಿದ್ದಾರೆ. ಆತನನ್ನು ನರಬಲಿ ಕೊಡುವ ಉದ್ದೇಶದಿಂದಲೇ ಅಪಹರಣ ಮಾಡಿದ್ದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈಗ ಈ ಬಾಲಾಪರಾಧಿಗಳನ್ನು ಕಸ್ಟಡಿಗೆ ತೆಗೆದುಕೊಂಡು ಆತನ ಮೇಲೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಭಾರತೀಯ ಸಂಹಿತೆ 302, 201 ಮತ್ತು 120ಬಿಯನ್ನು ಸೇರಿಸಲಾಗಿದೆ. ಘಟನೆಗೆ ಬಳಸಲಾಗಿದ್ದ ಆಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 9 ವರ್ಷದ ಬಾಲಕನನ್ನು ಕೊಲ್ಲಲು ಶೈಲೇಶ್ ಕೊಹೇರಾ (28) ಅನ್ನುವ ವ್ಯಕ್ತಿ ಸಹಾಯ ಮಾಡಿದ್ದು, ಆತನನ್ನು ಸಹ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

- Advertisement -

Related news

error: Content is protected !!