- Advertisement -
- Advertisement -
ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯೂ ಒಂಬತ್ತು ಮಂದಿ ಕ್ರೀಡಾ ಸಾಧಕರಿಗೆ ಖೇಲ್ ರತ್ನ ಅವಾರ್ಡ್ ಘೋಷಿಸಿದೆ. ಒಲಂಪಿಕ್ ಗೋಲ್ಡ್ ಮೆಡಲಿಸ್ಟ್ ನೀರಜ್ ಚೋಪ್ರಾ, ಕುಸ್ತಿಪಟು ರವಿ ಕುಮಾರ್ ದಹಿಯಾ, ಬಾಕ್ಸರ್ ಲವ್ಲೀನಾ ಬೋರ್ಗೊಹೈನ್ ಸೇರಿದಂತೆ 9 ಮಂದಿಗೆ ಖೇಲ್ ರತ್ನ ಅವಾರ್ಡ್ ಅನೌನ್ಸ್ ಮಾಡಲಾಗಿದೆ.
ಇದೇ ಬರುವ 13ನೇ ತಾರೀಕಿನಂದು ರಾಷ್ಟ್ರಪತಿ ಭವನದಲ್ಲಿ ಈ ಕ್ರೀಡಾ ಸಾಧಕರಿಗೆ ಖೇಲ್ ರತ್ನ ಅವಾರ್ಡ್ ಕೊಟ್ಟು ಗೌರವಿಸಲಾಗುವುದು ಎಂದು ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಿಳಿಸಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಎಲ್ಲರಿಗೂ ಕೈಯಾರೆ ಅವಾರ್ಡ್ ನೀಡಲಿದ್ದಾರೆ.
- Advertisement -