- Advertisement -
- Advertisement -
ಬಂಟ್ವಾಳ: ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬದಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ 19 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಹಳೆಪೇಟೆ ಟಿ.ಬಿ.ಕ್ರಾಸ್ ನಿವಾಸಿ ಮಣಿಕಂಠ (41) ಎಂಬಾತನನ್ನು ಬಂಟ್ವಾಳ ಠಾಣಾ ವಾರೆಂಟ್ ಸಿಬ್ಬಂದಿಯಾದ ಹೆಚ್ ಸಿ ಗಣೇಶ್, ಕ್ರೈಂ ಸಿಬ್ಬಂದಿಗಳಾದ ಹೆಚ್ಸಿ ರಾಜೇಶ್, ಪ್ರವೀಣ್ರವರು ಮಾಹಿತಿ ಸಂಗ್ರಹಿಸಿ ನೆಲ್ಯಾಡಿ ಸಮೀಪ ಬೆಳ್ತಂಗಡಿ ತಾಲೂಕಿನ ಶಿಬಾಜೆ ಎಂಬಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
- Advertisement -