Saturday, April 20, 2024
spot_imgspot_img
spot_imgspot_img

ನ.12 ರಿಂದ 14 ರೆಗೆ ಇಡ್ಕಿದು ರಜತಾದ್ರಿ ಮುಂಡ್ರಬೈಲು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

- Advertisement -G L Acharya panikkar
- Advertisement -

ವಿಟ್ಲ: ಇಡ್ಕಿದು ಗ್ರಾಮದ ರಜತಾದ್ರಿ ಮುಂಡ್ರಬೈಲು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ನ.12 ನೇ ಶನಿವಾರದಿಂದ ನ.14ನೇ ಸೋಮವಾರ ತನಕ ನಡೆಯಲಿದೆ.

ನ.12ರಂದು ಸಂಜೆ ಗಂಟೆ 6ಕ್ಕೆ ದುರ್ಗಾನಮಸ್ಕಾರ ಪೂಜೆ ಬಳಿಕ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 7:30 ಕ್ಕೆ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ಕೃಪಾಪೋಷಿತ ಯಕ್ಷಗಾನ ಮಂಡಳಿ ಅಂಗ್ರಿ ಕನ್ಯಾನ ಇವರಿಂದ ರಂಗಚಕ್ರವರ್ತಿ ಸುಬ್ಬು ಸಂಟ್ಯಾರ್ ವಿರಚಿತ ಅಜ್ಜನ ಪಜ್ಜೆ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.

ನ.13 ರಂದು ಮುಂಜಾನೆ ಗಂಟೆ 6 ರಿಂದ ಗಣಹೋಮ, ನಾಗತಂಬಿಲ, ನವಕಲಶ ನಡೆದು 7:30 ಕ್ಕೆ ಚಂಡಿಕಾ ಹವನ ಪ್ರಾರಂಭಗೊಳ್ಳಲಿದೆ. 11:30ಕ್ಕೆ ಚಂಡಿಕಾ ಹವನ ಪೂರ್ಣಾಹುತಿ ನಡೆದು ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 6ಕ್ಕೆ ದೈವದ ಭಂಡಾರ ತೆಗೆದು ಕಲ್ಲುರ್ಟಿ, ಪಟ್ಟದ ಪಂಜುರ್ಲಿ, ಗುಳಿಗನಿಗೆ ನೇಮೋತ್ಸವ ನಡೆಯಲಿದೆ. ರಾತ್ರಿ 8:30 ರಿಂದ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.

ನ.14 ರಂದು ಬೆಳಿಗ್ಗೆ 10:30 ಕ್ಕೆ ಶ್ರೀ ದೇವಿಗೆ ವಿಶೇಷ ಮಹಾಪೂಜೆ, ದೈವಗಳಿಗೆ ವಾರ್ಷಿಕ ತಂಬಿಲ ನಡೆದು ನಂತರ 11:30 ಕ್ಕೆ ಗುಳಿಗನಿಗೆ ಕೋಳಿ ನೀಡುವುದು, ರಾತ್ರಿ 8 ಗಂಟೆಗೆ ಕಲ್ಲುರ್ಟಿ ಅಗೇಲು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!