Wednesday, May 1, 2024
spot_imgspot_img
spot_imgspot_img

ಪತಿ-ಪತ್ನಿ ಜಗಳದಿಂದಾಗಿ ತನ್ನ ಮಗುವನ್ನೆ ಕೊಲೆ ಮಾಡಿದ ತಂದೆ

- Advertisement -G L Acharya panikkar
- Advertisement -

ತಂದೆ ತನ್ನ 14 ತಿಂಗಳ ಮಗುವನ್ನೆ ಹತ್ಯೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕನಸವಿಯ ಗ್ರಾಮದಲ್ಲಿ ನಡೆದಿದೆ.

ಪತಿ-ಪತ್ನಿ ಜಗಳದ ಹಿನ್ನಲೆಯಲ್ಲಿ ಆರೋಪಿ ಮಗುವನ್ನು ಕೊಲೆ ಮಾಡಿ ಕನಸವಿ ಗ್ರಾಮದ ಹೊರವಲಯದಲ್ಲಿ ಮೃತದೇಹವನ್ನು ಬಚ್ಚಿಟ್ಟಿದ್ದ ಎನ್ನಲಾಗಿದೆ.ಲಿಂಗಸುಗೂರು ತಾಲೂಕಿನ ಕನಸಾವಿ ಗ್ರಾಮದ ನಿವಾಸಿ 32 ವರ್ಷದ ಮಹಾಂತೇಶ್ ಆರೋಪಿ. ಮೃತ ಮಗುವನ್ನು ಅಭಿನವ (14) ಎಂದು ಗುರುತಿಸಲಾಗಿದೆ.  ಪತ್ನಿ ಭೀಮವ್ವ ಮುದಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಗು ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಿಸಿಕೊಡಿದ್ದ ಪೊಲೀಸರಿಗೆ ಮಹಾಂತೇಶ್ ಮೇಲೆ ಅನುಮಾನ ಬಂದು ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

ಮಗುವಿನ ಮೃತದೇಹವನ್ನು ಸುಟ್ಟಿರುವುದಾಗಿ ಹೇಳಿದ್ದು, ಆರೋಪಿ ಮೂರು ದಿನಗಳ ಬಳಿಕ ಶವ ಬಚ್ಚಿಟ್ಟಿರುವ ಸ್ಥಳವನ್ನು ತೋರಿಸಿದ್ದಾನೆ.

- Advertisement -

Related news

error: Content is protected !!