ಪುಂಜಾಲಕಟ್ಟೆ: ಅಕ್ರಮವಾಗಿ ದನ ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದ ಎಸ್.ಐ.ಮೇಲೆ ವಾಹನ ನುಗ್ಗಿಸಿ ಕೊಲ್ಲಲು ಪ್ರಯತ್ನ ಮಾಡಿದ ಘಟನೆ ವಾಮದಪದವು ಸಮೀಪದ ಕುದ್ಕೊಳಿ ಎಂಬಲ್ಲಿ ಮೇ.15 ರ ಮುಂಜಾನೆ ವೇಳೆ ನಡೆದಿದೆ.
ಇದರಿಂದ ಪುಂಜಾಲಕಟ್ಟೆ ಠಾಣಾಧಿಕಾರಿ ಸುತೇಶ್ ಕುಮಾರ್ ಅವರಿಗೆ ಭುಜ,ಮತ್ತು ಕೈಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಈ ಘಟನೆಯನ್ನು ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ತೀವ್ರವಾಗಿ ಖಂಡಿಸುತ್ತದೆ.
ಅಕ್ರಮ ಗೋವು ಸಾಗಟಗಾರರಿಗೆ ಕಾನೂನಿನ ಭಯ ಇಲ್ಲದೆ ಎಗ್ಗಿಲ್ಲದ ಕರವಾಳಿಯಲ್ಲಿ ಗೋವು ಸಾಗಟ ದಂಧೆ ನಡೆಯುತಿದ್ದು ಜನರಲ್ಲಿ ಅತಂಕದ ವಾತವರಣ ಸೃಷ್ಟಿ ಮಾಡಿದ್ದು ಗೋವು ಕಳ್ಳರು ಮನೆಮಾಲಿಕರಿಗೆ ತಳುವಾರು ಝಳಪಿಸಿ ಗೋವು ಕಳ್ಳತನ ಮಾಡುತಿದ್ದು ಈಗ ಅಡ್ಡ ಬಂದ ಪೋಲಿಸರನ್ನು ಕೊಲೆ ಪ್ರಯತ್ನ ಮಾಡುವ ಮಟ್ಟಕ್ಕೆ ಬೆಳೆದಿದ್ದು ಇದು ಖಂಡನಿಯ.
ಪೋಲೀಸರಿಗೆ ರಾತ್ರಿ ಸಮಯದಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ಸರಕಾರ ಮತ್ತು ಮೇಲಾಧಿಕಾರಿಗಳು ಒದಗಿಸಬೇಕು ಮತ್ತು ಜಿಲ್ಲೆಯಾದ್ಯಂತ ಚೇಕ್ ಪೋಸ್ಟ್ ಗಳನ್ನು ತೆರೆದು ಗೋವು ಸಾಗಟವನ್ನು ತಡೆಗಟ್ಟ ಬೇಕು ಎಂದು ಮನವಿ ಮಾಡಿಕೊಳ್ಳುತ್ತದೆ. ಅಕ್ರಮ ಗೋವು ಸಾಗಟನೆಯ ತಡೆಯುವ ಕಾರ್ಯಾಚರಣೆ ನಡೆಸಿದ ಪುಂಜಾಲಕಟ್ಟೆ ಪೋಲೀಸರ ಕಾರ್ಯ ಶ್ಲಾಘನೀಯ.