Wednesday, April 24, 2024
spot_imgspot_img
spot_imgspot_img

ಪುತ್ತೂರು: ಅಭಿನಂದನ್ ಸ್ಪೋರ್ಟ್ಸ್ ಕ್ಲಬ್ ತಿಂಗಳಾಡಿ(ರಿ.) ಇದರ ವತಿಯಿಂದ 3ನೇ ಆವೃತ್ತಿಯ THINGALADY PREMIER LEAGUE – 2023

- Advertisement -G L Acharya panikkar
- Advertisement -

ಪುತ್ತೂರು: ಅಭಿನಂದನ್ ಸ್ಪೋರ್ಟ್ಸ್ ಕ್ಲಬ್ ತಿಂಗಳಾಡಿ(ರಿ.) ಇದರ ವತಿಯಿಂದ 3ನೇ ಆವೃತ್ತಿಯ THINGALADY PREMIER LEAGUE – 2023 ಸನ್ಮಾನ ಕಾರ್ಯಕ್ರಮ ಹಾಗೂ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ನಾಲ್ಕು ತಂಡಗಳ ನಿಗದಿತ ಓವರ್ ಗಳ ಲೀಗ್‌ ಮಾದರಿ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಜ. 8 ರಂದು ಆದಿತ್ಯವಾರ ಸ್ಥಳ ಕೆಯ್ಯೂರು ಶಾಲಾ ಮೈದಾನದಲ್ಲಿ ನಡೆಯಲಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸತೀಶ್ ರೈ ಮಿತ್ತೋಡಿ, ಅಧ್ಯಕ್ಷರು ಅಭಿನಂದನ್ ಸ್ಪೋರ್ಟ್ಸ್ ಕ್ಲಬ್ ತಿಂಗಳಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಯ್ಯೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಮುಖ್ಯೋಪಾಧ್ಯಾಯರು ಬಾಬು ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಿದ್ದಾರೆ.

ಸಂಜೆ ನಡೆಯುವ ಸಮಾರೋಪ ಸಮಾರಂಭ, ಪ್ರಶಸ್ತಿ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ರತನ್ ರೈ ಕುಂಬ್ರ, ಅಧ್ಯಕ್ಷರು ಗ್ರಾಮ ಪಂಚಾಯತ್ ಕೆದಂಬಾಡಿ, ರಾಮ್‌ ದಾಸ್‌ ಶೆಟ್ಟಿ ವಿಟ್ಲ, ರಾಜ್ಯ ಸಂಚಾಲಕರು ಜಯ ಕರ್ನಾಟಕ ಜನಪರ ವೇದಿಕೆ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರವಿಕುಮಾರ್ ರೈ ಮಠ, ಸ್ಥಾಪಕಾಧ್ಯಕ್ಷರು ಅಭಿನಂದನ್ ಸ್ಪೋರ್ಟ್ಸ್ ಕ್ಲಬ್ ತಿಂಗಳಾಡಿ, ಪ್ರವೀಣ್‌ ಶೆಟ್ಟಿ ಮಠ, ಜಿಲ್ಲಾಧ್ಯಕ್ಷರು ಜಯ ಕರ್ನಾಟಕ ಜನಪರ ವೇದಿಕೆ, ದೀಪಕ್‌ ಅಮೀನ್‌, ಅಧ್ಯಕ್ಷರು ಜಯ ಕರ್ನಾಟಕ ಜನಪರ ವೇದಿಕೆ ಪುತ್ತೂರು ಇವರು ಗೌರವ ಉಪಸ್ಥಿತರಿರುವರು.

ಈ ಕಾರ್ಯಕ್ರಮದಲ್ಲಿ ಶ್ರೀಧರ ರೈ ಕೋಡಂಬು, ಪತ್ರಕರ್ತರು ಸುದ್ದಿ ಬಿಡುಗಡೆ ಪುತ್ತೂರು, ಆದಪ್ಪ ಗೌಡ, ಲೈನ್‌ ಮ್ಯಾನ್‌ ಮೆಸ್ಕಾಂ ಕುಂಬ್ರ ಇವರನ್ನು ಸನ್ಮಾನಿಸಲಿದ್ದಾರೆ. ಹಾಗೂ ಕಲಿಕೆಯಲ್ಲಿ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾ ರ್ಥಿಗಳಿಗೆ ಅಭಿನಂದನಾ ಪುರಸ್ಕಾರ ನಡೆಯಲಿದೆ.

ತಂಡಗಳ ವಿವರ:
ಶ್ರೀಕೃಷ್ಣ ವಾರಿಯರ್ಸ್ , ತುಳುನಾಡ ಟೈಗರ್ಸ್‌ , ಅಭಿನಂದನ್ ರೈಡರ್ಸ್ , ಸಂಡೇ ಅಚೀವರ್ಸ್

- Advertisement -

Related news

error: Content is protected !!