Wednesday, May 8, 2024
spot_imgspot_img
spot_imgspot_img

ಪುತ್ತೂರು: ಊಟ ಮಾಡುತ್ತಿದ್ದ ಸಂದರ್ಭ ತಿಂದ ಆಹಾರ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು..!

- Advertisement -G L Acharya panikkar
- Advertisement -

ಪುತ್ತೂರು: ಮನೆಯಲ್ಲಿ ಊಟ ಮಾಡುತ್ತಿದ್ದ ಸಂಧರ್ಭ ತಿಂದ ಆಹಾರ ಗಂಟಲಲ್ಲಿ ಸಿಲುಕಿ ಸಾವನ್ನಪ್ಪಿದ ಅಪರೂಪದ ಪ್ರಕರಣವೊಂದು ದಾಖಲಾಗಿದೆ.

ಪುತ್ತೂರು ತಾಲೂಕಿನ ನಿಡ್ನಳ್ಳಿ ಗ್ರಾಮದ ಕುಕ್ಕುಪುಣಿಯ ಕೊರಗಪ್ಪ ನಲಿಕೆ ಅವರೇ ಈ ರೀತಿ ಮೃತಪಟ್ಟ ದುರ್ದೈವಿ.

ಕೊರಗಪ್ಪ ನಲಿಕೆ ಮಧ್ಯಾಹ್ನ ತಮ್ಮ ಮನೆಯಲ್ಲಿ ಗಮ್ಮತ್ತಿನ ಊಟ ಮಾಡುತ್ತಿದ್ದರು. ನಿನ್ನೆ ಮಧ್ಯಾಹ್ನ ಅವರ ಮನೆಯಲ್ಲಿ ಮಧ್ಯಾಹ್ನದ ಊಟಕ್ಕೆ ಮಾಂಸಾಹಾರದ ಅಡುಗೆ ಮಾಡಿದ್ದರು.

ಕೊರಗಪ್ಪ ನಲಿಕೆ ರವರು ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಆಹಾರ ಗಂಟಲಲ್ಲಿ ಸಿಲುಕಿಕೊಂಡು ಉಸಿರಾಡಲು ಕಷ್ಟವಾಗಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡ ಅವರನ್ನು ಕೂಡಲೇ ಅಟೋರಿಕ್ಷಾದಲ್ಲಿ ಪಕ್ಕದ ಮುಡಿಪಿನಡ್ಕದಲ್ಲಿರುವ ಕಶ್ಯಪ ಕ್ಲಿನಿಕ್ ಗೆ ಕರೆದುಕೊಂಡು ಹೋಗಿದ್ದಾರೆ.

ಅಲ್ಲಿನ ವೈದ್ಯರು ಪರೀಕ್ಷಿಸಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲು ಸೂಚಿಸಿದ್ದಾರೆ. ಅವರನ್ನು ಪುತ್ತೂರು ಆಸ್ಪತ್ರೆಗೆ ಒಯ್ಯುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅವರ ಮಗ ಲಕ್ಷ್ಮೀಶ್ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -

Related news

error: Content is protected !!