- Advertisement -
- Advertisement -
ಪುತ್ತೂರು: ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರೂ, ರೈ ಎಸ್ಟೇಟ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಪ್ರವರ್ತಕರೂ, ಹಲವು ದೇವಸ್ಥಾನ ಹಾಗೂ ದೈವಸ್ಥಾನಗಳ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ರೂವಾರಿಗಳೂ, ಅಡಿಕೆ ಮತ್ತು ಕಂಬಳ ಪರ ಹೋರಾಟಗಾರರೂ ಆಗಿರುವ ಸಾಮಾಜಿಕ ಮುಂದಾಳು ಅಶೋಕ್ ಕುಮಾರ್ ರೈಯವರಿಗೆ ರಾಜಕೀಯ ಶಕ್ತಿ ಮತ್ತು ಸ್ಥಾನಮಾನ ಸಿಗುವಂತಾಗಬೇಕು ಎಂದು ಪ್ರಾರ್ಥಿಸಿ ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಜ.10 ರಂದು ರಾತ್ರಿ ಅಶೋಕ್ ಕುಮಾರ್ ರೈಯವರ ಅಭಿಮಾನಿಗಳು ಮತ್ತು ಹಿತೈಷಿಗಳ ವತಿಯಿಂದ ವಿಶೇಷ ರಂಗಪೂಜೆ ನಡೆಯಿತು.
- Advertisement -