- Advertisement -
- Advertisement -
ಪುತ್ತಿಲ ನಾಮಪತ್ರ ಸಲ್ಲಿಕೆ ಹಿನ್ನಲೆ ಜನ ಸಂದಣಿಯನ್ನು ತಡೆಯುವ ಯತ್ನ
ಇಂದು ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ. ಈ ದಿನ ಪುತ್ತೂರಿಗೆ ಲಕ್ಷಾಂತರ ಭಕ್ತರು ಆಗಮಿಸಿ ದೇವರ ಉತ್ಸವದಲ್ಲಿ ಬೆಳಗಿನಿಂದಲೇ ಭಾಗವಹಿಸುವುದು ಸಾಮಾನ್ಯ. ಆದರೆ ಇಂದು ಹಿಂದೂ ಮುಖಂಡ, ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿರುವ ಅರುಣ್ ಕುಮಾರ್ ಪುತ್ತಿಲ ಅವರ ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮವು ಪುತ್ತೂರಿನಲ್ಲಿ ನಡೆಯಲಿದೆ. ಅದಕ್ಕಾಗಿ ಅವರ ಬೆಂಬಲಿಗರು ಪುತ್ತೂರಿಗೆ ಆಗಮಿಸುತ್ತಿದ್ದಾರೆ.
ಪುತ್ತಿಲ ಅಭಿಮಾನಿಗಳನ್ನು ತಡೆಯಲು ಪೊಲೀಸರನ್ನು ನಿಯೋಜಿಸಿದ ಮುಖಂಡರು ಕೇಸರಿ ಶಾಲು ಧರಿಸಿ ಬಂದ ಎಲ್ಲಾ ದ್ವಿಚಕ್ರ ವಾಹನ ಸವಾರರನ್ನು ತಡೆಯುತ್ತಾರೆ. ಆದರೆ ಪುತ್ತಿಲ ಅಭಿಮಾನಿಗಳ ಜತೆಗೆ ಜಾತ್ರೋತ್ಸವಕ್ಕೆ ಬರುವವರೆಗೂ ಪೊಲೀಸರ ಹಿಂಸೆ ಆರಂಭವಾಗಿದೆ. ಮಹಾಲಿಂಗೇಶ್ವರ ದೇವರ ಜಾತ್ರೆಗೆ ಬರುವ ಭಕ್ತರಿಗೆ ಈ ರೀತಿಯಾಗಿ ಕಿರುಕುಳ ನೀಡಿ ತಡೆಯುವುದು ಸೂಕ್ತವಲ್ಲ ಎಂದು ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿದ್ದಾರೆ.
- Advertisement -