Tuesday, April 30, 2024
spot_imgspot_img
spot_imgspot_img

ಪುತ್ತೂರು: ಯುವತಿಯನ್ನು ಅಪಹರಿಸಿ ಕೇರಳಕ್ಕೆ ಸಾಗಾಟ: 6 ಮಂದಿ ವಿರುದ್ದ ಪ್ರಕರಣ ದಾಖಲು

- Advertisement -G L Acharya panikkar
- Advertisement -

ಪುತ್ತೂರು : ಪುತ್ತೂರಿನ ಬಲ್ನಾಡಿನಿಂದ ಕಡಬಕ್ಕೆ ಉದ್ಯೋಗಕ್ಕೆ ಬರುತ್ತಿದ್ದ ಯುವತಿಯನ್ನು ಆಕೆಯ ಮನೆಯ ಪಕ್ಕದಿಂದಲೇ ಅಪಹರಿಸಿ ಕೇರಳಕ್ಕೆ ಸಾಗಿಸಿದ ಪ್ರಕರಣ ಏಪ್ರಿಲ್ 10 ರಂದು ನಡೆದಿದೆ.

Kidnapping - Jealous neighbours kidnap biker, arrested in Park Circus -  Telegraph India

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರಲ್ಲಿ ಭಾಗಿಯಾದ ಒಟ್ಟು 6 ಜನರ ಮೇಲೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಪ್ರಮುಖ ಆರೋಪಿಗಳು ಪರಮೇಶ್ವರಿ, ರವಿನಾರಾಯಣ, ಆದರ್ಶ, ಅರವಿಂದ, ನಾರಾಯಣ ಎಂದು ತಿಳಿದುಬಂದಿದೆ.

Goa: Crime branch to probe Calangute attack case, police inspector Nolasco  Raposo suspended | Goa News - Times of India

ದಿನಾಂಕ 10.05.2022 ರಂದು ಯುವತಿಯು ತನ್ನ ಮನೆಯಿಂದ ಆಫೀಸಿಗೆ ತೆರಳುವ ಸಮಯ ಬಲ್ನಾಡು ದಂಡನಾಯಕ ಉಳ್ಳಾಳ್ತಿ ದೇವಸ್ಥಾನದ ಸಮೀಪ 4 ಜನ ಅಪರಿಚಿತರು ಬಲವಂತವಾಗಿ ಕಾರಿನಲ್ಲಿ ಎಳೆದು ಹಾಕಿಕೊಂಡು ಪರಮೇಶ್ವರಿ ಹಾಗೂ ರವಿ ನಾರಾಯಣರ ಮನೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ನಾರಾಯಣ ಪ್ರಸಾದ್ ಹಾಗೂ 2 ಗಂಡಸರು ಹೊಡೆದು ಯುವತಿಯ ಬಟ್ಟೆ ತೆಗೆಯಲು ಬಲವಂತವಾಗಿ ಪ್ರಯತ್ನ ಪಟ್ಟು ಪರಮೇಶ್ವರಿ, ರವಿನಾರಾಯಣ, ಆದರ್ಶ, ಅರವಿಂದ, ನಾರಾಯಣ ಎಂಬುವವರು ಯಾವುದೋ ಪಾನೀಯವನ್ನು ಕುಡಿಸಿ ಪ್ರಜ್ಞೆ ತಪ್ಪಿಸಿ ಕಾರಿನಲ್ಲಿ ಕಣ್ಣೂರು ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತನ್ನ ಮೈಮುಟ್ಟಿ ಹೊಡೆದು ದುರುದ್ದೇಶದಿಂದ ಅಪರಣ ಮಾಡಿದ ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕಾಗಿ ಯುವತಿ ದೂರು ದಾಖಲಿಸಿದ್ದಾಳೆ.

- Advertisement -

Related news

error: Content is protected !!