- Advertisement -
- Advertisement -
ಪುತ್ತೂರು: ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲದ ವತಿಯಿಂದ ನಮ್ಮೆಲ್ಲರನ್ನು ಅಗಲಿದ ಸಹೋದರ ಪ್ರವೀಣ್ ನೆಟ್ಟಾರುರವರ ಶ್ರದ್ಧಾಂಜಲಿ ಸಭೆಯು ಪಂಚಲಿಂಗೇಶ್ವರ ಸಭಾ ಭವನ ಈಶ್ವರಮಂಗಲದಲ್ಲಿ ನಡೆಯಿತು.
ಸೇರಿರುವ ಎಲ್ಲರೂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ನಮನವನ್ನು ಸಲ್ಲಿಸಿ, ಕಾರ್ಯಕ್ರಮ ಆರಂಭಿಸಲಾಯಿತು. ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಯುವ ವಾಹಿನಿ ಸಹಪ್ರಮುಖ್ ಚಿನ್ಮಯ್ ಈಶ್ವರಮಂಗಲ, ಹಿರಿಯರಾದ ಪೂರ್ಣತ್ಮ ರಾಮ್ ಈಶ್ವರಮಂಗಲ, ರಾಜೇಂದ್ರ ಪ್ರಸಾದ್ ರೈ ಮೇನಾಲ ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ನಿವೃತ್ತ ಅಧ್ಯಾಪಕರಾದ ರಾಮಣ್ಣ ರೈ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ರಾಜೇಶ್ ಪಂಚೋಡಿ, ತಾಲೂಕ್ ಸಂಪರ್ಕ ಪ್ರಮುಖ ಪ್ರಜ್ವಲ್, ದೀಪಕ್ ಮುಂಡ್ಯ, ಸತೀಶ್ ಸುರುಲಿಮೂಳೆ, ಚಂದ್ರಹಾಸ, ಗೌರೀಶ್, ಹರೀಶ್ ಬಾಬು, ಚಂದ್ರ ಟೈಲರ್ ಸೇರಿದಂತೆ ಅನೇಕ ಸಂಘಟನೆ ಮತ್ತು ಪರಿವಾರದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಂಘ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
- Advertisement -