ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ತಾಳಿತ್ತನೂಜಿ, ಬಾರೆಬೆಟ್ಟು, ಪಂಜಿಗದ್ದೆ ಸಂಪರ್ಕದ ರಸ್ತೆಗೆ ಸ್ಥಳೀಯ ನಾಗರಿಕರು ಹಲವಾರು ದಶಕಗಳಿಂದ ಎಲ್ಲಾ ಜನಪ್ರತಿನಿಧಿಗಳಿಗೆ, ಸ್ಥಳೀಯ ಪಂಚಾಯತ್ ಗೆ ತಮ್ಮ ಅಹವಾಲುಗಳನ್ನು ಸಲ್ಲಿಸುತ್ತಿದ್ದು, ಇನ್ನು ಯಾವುದೇ ಪ್ರಯೋಜನ ಇಲ್ಲ ಎಂದು ನಿರಾಶರಾಗಿದ್ದ ಸಂದರ್ಭದಲ್ಲಿ ಸ್ಥಳೀಯರಾದ ಪಂಜಿಗದ್ದೆ ಈಶ್ವರ ಭಟ್ ರವರ ಸತತ ಪ್ರಯತ್ನದಿಂದ ಹಿರಿಯ ವಕೀಲರಾದ ಅರುಣಶ್ಯಾಮ್ ಮುತುವರ್ಜಿಯಿಂದ ಸ್ಥಳೀಯ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ನಾರಾಯಣ ಶೆಟ್ಟಿಯವರ ಪರಿಶ್ರಮದಿಂದ ಈಗ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರ ವಿಶೇಷ ಅನುದಾನದಲ್ಲಿ (600ಮೀಟರ್ ಉದ್ದ 12ಅಡಿ ಅಗಲ, ಅಲ್ಲದೆ ಈ ಮೊದಲು ಹತ್ತು ಲಕ್ಷ +ತಾಲೂಕು ಪಂಚಾಯತ್ ಅನುದಾನ ಎಪ್ಪತ್ತು ಸಾವಿರ ) ರಸ್ತೆಯು ಕಾಂಕ್ರಿಟ್ ಗೊಂಡಿದೆ.
ಅನುದಾನ ದೊರಕಿಸುವಲ್ಲಿ ಮುತುವರ್ಜಿ ವಹಿಸಿದ ಈಶ್ವರ ಭಟ್ ಪಂಜಿಗದ್ದೆ ಸಾಂಕೇತಿಕವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದಾಮೋದರ ರೈ ಬಾರೆಬೆಟ್ಟು ಮಾಜಿ ತಾಲೂಕು ಪಂಚಾಯತ್ ಸದಸ್ಯ ನಾರಾಯಣ ಶೆಟ್ಟಿ ಕುಲ್ಯಾರು, ಪಂಚಾಯತ್ ಸದಸ್ಯ ರಾಜಾರಾಮ ಹೆಗ್ಡೆ ಕುದ್ರಿಯ, ಲೋಹಿತ್ ಅಗರಿ, ಪ್ರಶಾಂತ್ ಶೆಟ್ಟಿ ಅಗರಿ, ಹರೀಶ್ ಟೈಲರ್ ಮಂಕುಡೆ, ಗಂಗಾಧರ ಚೌಟ ದೇವಸ್ಯ, ಬೂತ್ ಅಧ್ಯಕ್ಷ ಗಣೇಶ್ ಶೆಟ್ಟಿ ಬಾರೆಬೆಟ್ಟು, ಮತ್ತು ಸದ್ರಿ ರಸ್ತೆಯ ಫಲಾನುಭವಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ರಸ್ತೆ ಕಾಂಕ್ರೀಟ್ಕರಣಗೊಳ್ಳಲು ಸಹಕರಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಯ್ಕ್ ರವರಿಗೆ, ನಾರಾಯಣ ಶೆಟ್ಟಿ ಕುಲ್ಯಾರುರವರಿಗೆ ಮತ್ತು ಅರುಣಶ್ಯಾಮ್ ಪಂಜಿಗದ್ದೆ, ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿಯವರಿಗೆ ಕೃತಜ್ಞತೆ ಸಲ್ಲಿಸಲಾಯಿತು.