- Advertisement -
- Advertisement -
ಕಲ್ಲಡ್ಕ: ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾನಗರ ಪಾಳ್ಯ ಇಲ್ಲಿನ ಆಡಳಿತ ಮಂಡಳಿ ಮತ್ತು ಭೋದಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರ ಮನೆ ಮನೆಗೆ ತೆರಳಿ ಧ್ವಜಾರೋಹಣ ಮಾಡಿ ಹರ್ ಘರ್ ತಿರಂಗ ಅಭಿಯಾನದ ಖುಷಿಯನ್ನು ಸಂಭ್ರಮದಿಂದ ಆಚರಿಸಿದರು.
ಈ ಸಂಭ್ರಮದ ದಿನವನ್ನು ವಿಡಿಯೋ ಚಿತ್ರೀಕರಿಸಿ ವಿ.ಟಿವಿ ಮಾಧ್ಯಮದ ಸಹಯೋಗದೊಂದಿಗೆ ಹೊಸ ಆಲ್ಬಮ್ ವೀಡಿಯೋ ರಚಿಸಲಾಯಿತು. ಈ ವೀಡಿಯೋ ಆಲ್ಬಮ್ ಚಿತ್ರಣವನ್ನು ಬಾಲವಿಕಾಸ ವಿದ್ಯಾಸಂಸ್ಥೆಯ ಸಂಚಾಲಕರಾದ ಪ್ರಹ್ಲಾದ ಜೆ. ಶೆಟ್ಟಿ ಬಿಡುಗಡೆ ಮಾಡಿದರು.
ಘನ ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ರವೀಂದ್ರ ದರ್ಬೆ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ. ಶೆಟ್ಟಿ ಉಪಸ್ಥಿತರಿದ್ದರು.
- Advertisement -