- Advertisement -
- Advertisement -
ಬಂಟ್ವಾಳ : ಬಿ.ಸಿ.ರೋಡ್ನ ಪ್ರತಿಷ್ಠಿತ ಶ್ರೀಕೃಷ್ಣ ವಿಲಾಸ ಹೋಟೆಲ್ಗೆ ಕಳ್ಳರು ನುಗ್ಗಿ ಅಪಾರ ಸಾವಿರಾರು ಪ್ರಮಾಣದ ನಗದು ದೋಚಿ ಪರಾರಿಯಾದ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆ ಸಮೀಪ ಇರುವ ಕಿಶೋರ್ ಮಾಲಕತ್ವದ ಶ್ರೀಕೃಷ್ಣ ವಿಲಾಸ ಹೊಟೇಲ್ಗೆ ನುಗ್ಗಿದ ಕಳ್ಳರು ಶಟರ್ ತೆಗೆದು ಒಳನುಗ್ಗಿದ್ದು, ಈ ವೇಳೆ ಕ್ಯಾಶ್ ಕೌಂಟರ್ನಲ್ಲಿದ್ದ ಸುಮಾರು 30,000ಕ್ಕಿಂತಲೂ ಅಧಿಕ ಮೊತ್ತವನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪ್ರಕರಣ ದಾಖಲಾಗಿದೆ.
- Advertisement -