Thursday, May 2, 2024
spot_imgspot_img
spot_imgspot_img

ಬೆಳ್ತಂಗಡಿ: ಖಾಸಗಿ ಶಾಲೆಯೊಂದರ ಮಾಜಿ ಶಿಕ್ಷಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ

- Advertisement -G L Acharya panikkar
- Advertisement -

ಬೆಳ್ತಂಗಡಿ: ಖಾಸಗಿ ಶಾಲೆಯೊಂದರ ಮಾಜಿ ಶಾಲಾ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಮುಂಡ್ರುಪಾಡಿ ಎಂಬಲ್ಲಿ ನಡೆದಿದೆ.

ಮುಂಡ್ರುಪಾಡಿ ನಿವಾಸಿಯಾದ ಶಿಕ್ಷಕಿ ಚೈತ್ರ ಅಡಿಗ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆಕೆ ವಿವಾಹಿತರಾಗಿದ್ದು, ಪತಿ ದೀಪಕ್ ಮತ್ತು ಪುಟ್ಟ ಕಂದಮ್ಮನನ್ನುಅಗಲಿದ್ದಾರೆ.

ಚೈತ್ರಾ ಅವರು ಕುಟುಂಬದೊಂದಿಗೆ ಧರ್ಮಸ್ಥಳದಲ್ಲಿ ವಾಸವಿದ್ದರು. ಪತಿ ಮತ್ತು ಮಾವನವರು ಪೌರೋಹಿತ್ಯ ಕೆಲಸ ಮಾಡುತ್ತಿದ್ದಾರೆ. ಚೈತ್ರಾ ಅವರು ಕಳೆದ 2 ವರ್ಷಗಳಿಂದ ಕೆಲಸ ಬಿಟ್ಟು ಮನೆಯಲ್ಲೇ ಇದ್ದರು. ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

- Advertisement -

Related news

error: Content is protected !!