- Advertisement -
- Advertisement -
ಬೆಳ್ತಂಗಡಿ: ಕಕ್ಕಿಂಜೆ ಮುಂಡಾಜೆ ಬಳಿಯ ಕಾಪು ಚೆಡಾವು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ನದಿಗೆ ಉರುಳಿದ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಮಹಿಳೆ ಸಾವು.
ಮೃತಪಟ್ಟ ಮಹಿಳೆಯನ್ನು ಕಕ್ಕಿಂಜೆ ಕತ್ತರಿಗುಡ್ಡೆಯ ಸಫೀಯ(57) ಎನ್ನಲಾಗಿದೆ.
ಕಾಜೂರಿನ ಉರೂಸ್ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಆಟೋ ರಿಕ್ಷಾ ಮುಂಡಾಜೆ ಬಳಿಯ ಕಾಪು ಚೆಡಾವು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ನದಿಯ ಪ್ರಪಾತಕ್ಕೆ ಉರುಳಿಬಿದ್ದಿದೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡ ಸಫಿಯಾ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದು, ಉಳಿದ ಪ್ರಯಾಣಿಕರಾದ ಮಹಮ್ಮದ್ ಆಶ್ರಫ್ , ಮರಿಯಮ್ಮರಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -