- Advertisement -
- Advertisement -
ಬೆಳ್ತಂಗಡಿ: ತೋಟತ್ತಾಡಿ ಗ್ರಾಮದ ಕುತ್ರಿಜಾಲು ಎಂಬಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಹನುಮಂತಪ್ಪ ಅವರ ಪುತ್ರ ರಮೇಶ್ ಬಿ.(45) ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಸಂಬಂಧ ಮೃತರ ಪತ್ನಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ. ಬಂಟ್ವಾಳ ತಾಲೂಕಿನ ಸರಕಾರಿ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮೃತರ ಪತ್ನಿ ಹಾಗೂ ಪುತ್ರ ವಾಮದಪದವಿನಲ್ಲಿ ಮನೆ ಮಾಡಿಕೊಂಡಿದ್ದಾರೆ. ಮೃತರು ಈ ಮೊದಲು ವಾಮದಪದವಿನಲ್ಲಿ ಬಾಡಿಗೆಗೆ ಸೆಲೂನ್ ಹೊಂದಿ ನಷ್ಟ ಮಾಡಿಕೊಂಡಿದ್ದು, ಅಂಗಡಿಯನ್ನು ಬಿಟ್ಟು, ಸುಮಾರು ಒಂದು ವರ್ಷದಿಂದ ತನ್ನ ತಾಯಿಯ ಊರಾದ ಗಂಡಿಬಾಗಿಲಿನ ಸಮೀಪ ಇರುವ ಬಯಲು ಬಸ್ತಿ ಎಂಬಲ್ಲಿರುವ ಸೆಲೂನ್ ನಲ್ಲಿ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದರು.
ಕುತ್ರಿಜಾಲುವಿನಲ್ಲಿ ಬಾಡಿಗೆಗೆ ರೂಂ.ನಲ್ಲಿ ಇರುತ್ತಿದ್ದರು. ಕುಡಿತದ ಚಟ ಹೊಂದಿದ್ದ ಅವರು ವಿಪರೀತ ರಕ್ತದೊತ್ತಡ ಹಾಗೂ ಸಕ್ಕರ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
- Advertisement -