- Advertisement -
- Advertisement -
ಪೊಲೀಸ್ ಇಲಾಖೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ್ದಕ್ಕೆ ಹಾಗೂ ಅಪರಾಧ ಪ್ರಕರಣಗಳನ್ನು ಭೇದಿಸಿದ ದಕ್ಷ ಪ್ರಾಮಾಣಿಕ ಪ್ರಸ್ತುತ ಬೆಳ್ತಂಗಡಿ ಪೊಲೀಸ್ ಠಾಣೆಯ ಪಿಎಸ್ಐ ಅಗಿರುವ ನಂದಕುಮಾರ್ ಎಂ.ಎಂ ಅವರು ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಇತ್ತೀಚಿಗೆ ನಡೆದ ಮಗು ಅಪಹರಣ ಪ್ರಕರಣ ವನ್ನು ಯಶಸ್ವಿಯಾಗಿ ಬೇಧಿಸಿದ ಕೀರ್ತಿ ನಂದಕುಮಾರ್ ಅವರಿಗೆ ಸಲ್ಲುತ್ತದೆ. ಜೊತೆಗೆ ಉಪ್ಪಿನಂಗಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಹಾಗೂ ಬಂಟ್ವಾಳ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅನೇಕ ಅಪರಾಧ ಪ್ರಕರಣಗಳ ಸಹಿತ ಶಾಂತಿ ಸುವ್ಯವಸ್ಥೆ ಯಲ್ಲಿ ದಕ್ಷ ಪ್ರಾಮಾಣಿಕ ಸೇವೆ ಮಾಡಿದ್ದ ನಂದ ಕುಮಾರ್ ಅವರನ್ನು ಸರಕಾರ ಗುರುತಿಸಿ ಮುಖ್ಯ ಮಂತ್ರಿ ಪದಕ ನೀಡಲು ಮುಂದಾಗಿದೆ.
- Advertisement -