Saturday, May 4, 2024
spot_imgspot_img
spot_imgspot_img

ಮಂಗಳೂರು: ಚಿನ್ನದ ಒಡವೆಗಳನ್ನು ತೊಳೆದು ಕೊಡುವ ನೆಪದಲ್ಲಿ ಹಗಲು ದರೋಡೆ..!

- Advertisement -G L Acharya panikkar
- Advertisement -
vtv vitla

ಮಂಗಳೂರು: ಕಿನ್ನಿಗೋಳಿಯ ಸುತ್ತಮುತ್ತ ಮನೆ ಮನೆಗೆ ತೆರಳಿ ಚಿನ್ನದ ಒಡವೆಗಳನ್ನು ತೊಳೆದು ಕೊಡುವ ನೆಪದಲ್ಲಿ ಹಗಲು ದರೋಡೆಗೆ ಇಳಿಯುವ ತಂಡಗಳು ಕಾರ್ಯಾಚರಿಸುತ್ತಿವೆ ಎಂಬ ಆರೋಪಗಳು ಕೇಳಿ ಬಂದಿದೆ.

ಸದ್ಯ ಇಲ್ಲಿನ ಕಿನ್ನಿಗೋಳಿ ಪರಿಸರದಲ್ಲಿ ನಡೆದಿರುವ ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಮನೆಯೊಂದಕ್ಕೆ ಭೇಟಿ ನೀಡುವ ಯುವಕನೋರ್ವ ಚಿನ್ನದ ಒಡವೆಗಳನ್ನು ತೊಳೆಯುವ ನೆಪದಲ್ಲಿ ಪಡೆದುಕೊಳ್ಳುತ್ತಾನೆ. ಬಳಿಕ ತಾನೇ ತಂದಿರುವ ಪಾತ್ರೆಯಲ್ಲಿ ಪುಡಿಯೊಂದನ್ನು ಹಾಕಿ ನೀರಿನಲ್ಲಿ ತೊಳೆಯುತ್ತಾನೆ. ಆಗ ಚಿನ್ನ ಒಡವೆಗಳಿಗೆ ಹೊಳಪು ಬರುತ್ತದೆ. ಅದರೆ ಒಡವೆಯ ಸುಮಾರು 25 %ನಷ್ಟು ಕರಗಿ ಅವನು ತಂದಿರುವ ನೀರಿನಲ್ಲಿರುತ್ತದೆ.

ಕಿನ್ನಿಗೋಳಿ ಸುತ್ತಮುತ್ತ ಎರಡು ಮೂರು ಕಡೆಗಳಲ್ಲಿ ಇಂತಹ ಪ್ರಕರಣ ಬೆಳಕಿಗೆ ಬಂದಿದೆ. ಚಿನ್ನದ ಒಡವೆಗಳನ್ನು ತೊಳೆದ ಮೂರು ನಾಲ್ಕು ಗಂಟೆಗಳಲ್ಲಿ ತುಂಡು ತುಂಡಾಗುತ್ತದೆ ಎಂದು ಮೋಸ ಹೋದವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕಿನ್ನಿಗೋಳಿ ಸಮೀಪದಲ್ಲಿ ಮನೆಯೊಂದರಲ್ಲಿ ಬಂಗಾರ ತೊಳೆಯುವಾಗ ಯುವಕನೋರ್ವ ಈ ದೃಶ್ಯ ವನ್ನು ತಮ್ಮ ಮೊಬೈನಲ್ಲಿ ಸೆರೆ ಹಿಡಿದಿದ್ದು , ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಇವರು ತಂಡಗಳಿದ್ದು, ಒಬ್ಬಂಟಿಯಾಗಿ ಮನೆ ಮನೆಗೆ ತೆರಳಿ ಕಾರ್ಯಾಚರಿಸುತ್ತಿವೆ ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.

- Advertisement -

Related news

error: Content is protected !!