- Advertisement -
- Advertisement -
ಮಂಗಳೂರು: ನಗರದ ಹಂಪನ ಕಟ್ಟೆಯ ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿಯ ಕೊಲೆ ಪ್ರಕರಣದ ದುಷ್ಕರ್ಮಿಯ ಮತ್ತಷ್ಟು ಪೋಟೋಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಹಂಪನಕಟ್ಟೆ ಮಿಲಾಗ್ರಿಸ್ ಬಳಿ ಫೆ.3ರಂದು ಚಿನ್ನಾಭರಣ ಅಂಗಡಿಯಲ್ಲಿ ಅತ್ತಾವರ ನಿವಾಸಿ ರಾಘವೇಂದ್ರ ಆಚಾರ್ (55) ಅಪರಿಚಿತ ದುಷ್ಕರ್ಮಿ ಹಾಡಹಗಲೇ ಚೂರಿಯಿಂದ ಇರಿದ ಪರಿಣಾಮ ಮೃತಪಟ್ಟಿದ್ದರು.
ಮುಸುಕುಧಾರಿಯೊಬ್ಬ ಅಂಗಡಿಯಿಂದ ಹೊರ ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಧ್ಯಾಹ್ನದ ಊಟ ಮುಗಿಸಿ ಅಂಗಡಿಗೆ ಹಿಂತಿರುಗಿದಾಗ ಅಂಗಡಿ ಮಾಲಕರು ಘಟನೆ ಬಗ್ಗೆ ತಿಳಿದುಕೊಂಡಿದ್ದರು.
ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಸಂಪರ್ಕಿಸಿಬೇಕಾದ ಪೊಲೀಸ್ ಅಧಿಕಾರಿಗಳು:
ಪಿ ಎ ಹೆಗಡೆ -ಎಸಿಪಿ ಸಿಸಿಬಿ, ಮಂಗಳೂರು ನಗರ -ಮೊ: 9945054333,
ಮಹೇಶ್ ಕುಮಾರ್ , ಎಸಿಪಿ ಕೇಂದ್ರ ಉಪವಿಭಾಗ, ಮಂಗಳೂರು ನಗರ – ಮೊ: 9480805320
- Advertisement -