- Advertisement -
- Advertisement -
ಮಂಗಳೂರು: ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಮಗನಿಗೆ ತಾಯಿ ಬೈದರೆಂದು ಮನನೊಂದು ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ ಕೋಟಿಮುರದಲ್ಲಿರುವ ರೆಡ್ ಬ್ರಿಕ್ಸ್ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.
ಮೃತ ಬಾಲಕನನ್ನು ಕೋಟಿಮುರ ರೆಡ್ ಬ್ರಿಕ್ಸ್ ಅಪಾರ್ಟ್ಮೆಂಟ್ ನಿವಾಸಿಗಳಾದ ಜಗದೀಶ್ ಹಾಗೂ ವಿನಯ ದಂಪತಿಯ 9ನೇ ತರಗತಿ ಪುತ್ರ ಜ್ಞಾನೇಶ್(14) ಎಂದು ಗುರುತಿಸಲಾಗಿದೆ.
ಜ್ಞಾನೇಶ್ ಹೆಚ್ಚು ಮೊಬೈಲ್ ಬಳಸುತ್ತಿದ್ದು, ಈ ವಿಚಾರವಾಗಿ ತಾಯಿ ಬಾಲಕನನ್ನು ಗದರಿಸಿದ್ದಾರೆ. ತಾಯಿ ಬೈದರೆಂದು ಬೇಸರದಲ್ಲಿದ್ದು ನಂತರ ತಾನು ಸ್ನಾನ ಮಾಡಿ ಬರುವುದಾಗಿ ಹೇಳಿ ರೂಮಿನೊಳಗೆ ಹೋಗಿದ್ದಾನೆ. ತುಂಬಾ ಸಮಯ ಕಳೆದರು ರೂಂನಿಂದ ಮಗ ಬಾರದೇ ಇದ್ದಾಗ ತಂದೆ ಜಗದೀಶ್ ಕಿಟಕಿಯ ಮೂಲಕ ರೂಂನೊಳಗೆ ನೋಡಿದಾಗ ಬಾಲಕ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದೆ. ತಕ್ಷಣ ನೇಣು ಬಿಗಿದ ವೇಲನ್ನು ಕತ್ತರಿಸಿ ಕೆಳಗೆ ಇಳಿಸಿ ನೋಡಿದಾಗ ಬಾಲಕ ಮೃತಪಟ್ಟಿರುವುದು ತಿಳಿದುಬಂದಿದೆ.
- Advertisement -