ಮಂಗಳೂರು : ಬಾಲಕಿ ಜತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಕಟ್ಟಿ ಹಾಕಿ ಥಳಿಸಿದ ಘಟನೆ ಮೂಲ್ಕಿಯಲ್ಲಿ ಸಂಭವಿಸಿದೆ. ಯುವಕನೊಬ್ಬ ಬೈಕ್ನಲ್ಲಿ ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದು ಕಿರುಕುಳ ನೀಡಲು ಯತ್ನಿಸಿದ.
ಡಿಸೆಂಬರ್ 13ರಂದು ಕೆರೆಕಾಡು ಎಂಬಲ್ಲಿ ಬೈಕ್ನಲ್ಲಿ ಬಂದ ದಾವೂದ್ ಬಾಲಕಿಯನ್ನು ಹಿಂಬಾಲಿಸುತ್ತಾ ಅಸಭ್ಯವಾಗಿ ವರ್ತಿಸಿದ್ದ. ಈ ವಿಚಾರವನ್ನು ಬಾಲಕಿ ಮನೆಯಲ್ಲಿ ಹೇಳಿದ್ದಳು. ಇದರಿಂದ ಕುಪಿತರಾದ ಮನೆಯವರು ಮತ್ತು ಬಂಧುಗಳು ಇನ್ನೊಮ್ಮೆ ಈ ರೀತಿ ಮಾಡಿದರೆ ಚೆನ್ನಾಗಿ ಪಾಠ ಕಲಿಸಬೇಕು ಎಂದು ನಿರ್ಧರಿಸಿದರು. ಜತೆಗೆ ಬಾಲಕಿಯನ್ನು ದೂರದಿಂದಲೇ ಗಮನಿಸಲು ಶುರು ಮಾಡಿದರು.
ಈ ನಡುವೆ ಅದೇ ಯುವಕ ಮತ್ತೆ ಕಿರುಕುಳ ನೀಡಲು ಮುಂದಾದಾಗ ಪೋಷಕರು ಮತ್ತು ಅವರ ಜತೆಗಿದ್ದವರು ಯುವಕನನ್ನು ಹಿಡಿದು ಚೆನ್ನಾಗಿ ಥಳಿಸಿದರು. ಸಾಲದು ಎಂಬಂತೆ ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ. ಬಳಿಕ ಪೊಲೀಸರ ವಶಕ್ಕೊಪ್ಪಿಸಿ ಪೋಕ್ಸೋ, ಕೇಸು ದಾಖಲಿಸಿದ್ದಾರೆ. ಇದೇ ವೇಳೆ ಆರೋಪಿ ಕೂಡ ತನ್ನ ಮೇಲೆ ಹಲ್ಲೆ ಮಾಡಿದ ಕುರಿತು ಪ್ರತಿದೂರು ದಾಖಲಿಸಿದ್ದಾನೆ.