- Advertisement -
- Advertisement -
ಮಂಗಳೂರು: ಮಹಿಳೆ ತನ್ನ ನಾಲ್ಕು ವರ್ಷದ ಮಗಳೊಂದಿಗೆ ಆತ್ಮಹತ್ಯೆಗೆ ಶರಣಾದ ಘಟನೆ ಕೊಡಿಯಾಲಗುತ್ತುನಲ್ಲಿ ನಡೆದಿದ್ದು, ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನೆ ನೀಡಿದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಕೇಶವ ಬಂಧಿತ ಆರೋಪಿ.
ಈತನನ್ನು ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಬಂಧಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ವಿಜಯಾ (33) ಅವರು ತನ್ನ ನಾಲ್ಕು ವರ್ಷದ ಪುತ್ರಿ ಶೋಭಿಕಾ ಹಾಗೂ ಇನ್ನೋರ್ವಳು 12 ವರ್ಷದ ಪುತ್ರಿಯೊಂದಿಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. 12 ವರ್ಷದ ಪುತ್ರಿ ಪಾರಾಗಿದ್ದಳು. ವಿಜಯಾ ಮತ್ತು ಶೋಭಿಕಾ ಮೃತಪಟ್ಟಿದ್ದರು.
ಮಹಿಳೆಯ ಮನೆಯಲ್ಲಿ ಪೊಲೀಸರಿಗೆ ಡೆತ್ನೋಟ್ ದೊರೆತಿದ್ದು ಅದರ ಆಧಾರದಲ್ಲಿ ಕೇಶವ ಸೇರಿದಂತೆ ಮೂವರ ವಿರುದ್ಧ ಐಪಿಸಿ ಸೆಕ್ಷನ್ 306 (‘ಆತ್ಮಹತ್ಯೆಗೆ ಪ್ರಚೋದನೆ’) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ಇತರ ಇಬ್ಬರು ಆರೋಪಿಗಳಾದ ಬಾಬು ಮತ್ತು ಮಮತಾ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -