ಮಂಗಳೂರು: ಕಳೆದ ವರ್ಷದ ಆಗಸ್ಟ್ 4 ರಂದು ಮಂಗಳೂರಿನ ಉಳ್ಳಾಲದ ಮಾಜಿ ಶಾಸಕ, ಸಾಹಿತಿ ದಿವಂಗತ ಇದಿನಬ್ಬ ಪುತ್ರನ ಮನೆ ಮೇಲೆ ಎನ್ಐಎ ದಾಳಿ ನಡೆಸಿತ್ತು. ಸಿರಿಯಾ ಮೂಲದ ಐಸಿಸ್ ಉಗ್ರ ಸಂಘಟನೆಯ ಕುರಿತು ನಂಟಿರುವ ಶಂಕೆ ಹಿನ್ನೆಲೆಯಲ್ಲಿ ದಾಳಿ ನಡೆಸಿತ್ತು. ಇದಿನಬ್ಬ ಮೊಮ್ಮಗನಾದ ಅಮರ್ ಅಬ್ದುಲ್ ರೆಹಮಾನ್ ನನ್ನು ಬಂಧಿಸಿತ್ತು.
ಇತ್ತೀಚೆಗಷ್ಟೇ ಎನ್ಐಎ ಮತ್ತೆ ದಾಳಿ ಮಾಡಿ ಇದಿನಬ್ಬ ಮಗ ಬಿ.ಎಂ.ಭಾಷಾ ಸೊಸೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂನನ್ನು ಬಂಧಿಸಿತ್ತು. ದೆಹಲಿಗೆ ಕರೆದೊಯ್ದು ವಿಚಾರಣೆ ಮಾಡಿದಾಗ ದೀಪ್ತಿಯಿಂದ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ವೈದ್ಯೆ ದೀಪ್ತಿ ಅಲಿಯಾಸ್ ಮರಿಯಂ ಹನಿಟ್ರ್ಯಾಪ್ ಮೂಲಕ ಯುವಕರನ್ನ ಮತಾಂತರಗೊಳಿಸಿ ಐಸಿಸ್ ಸೇರಿಸಿರೋದು ತನಿಖೆ ವೇಳೆ ಬಯಲಾಗಿದೆ. ಅಲ್ಲದೇ ಇದಿನಬ್ಬ ಮೊಮ್ಮಗ ಅಬ್ದುಲ್ ಮದುವೆಯಾಗಿ ಇಸ್ಲಾಂಗೆ ದೀಪ್ತಿ ಮತಾಂತರಗೊಂಡಿದ್ದಳು. ತನ್ನ ಪತಿ ಅಬ್ದುಲ್ ಸೋದರ ಅಮರ್ ಅಬ್ದುಲ್ ಸೂಚನೆಗಳಂತೆ ಐಸಿಸ್ ಪರ ಕೆಲಸ ಮಾಡುತ್ತಿದ್ದಳು.
ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ 15 ನಕಲಿ ಸೋಷಿಯಲ್ ಮೀಡಿಯಾ ಖಾತೆಗಳನ್ನ ಹೊಂದಿದ್ದಾಳೆ. ಈ ಹಿಂದೆ ಎನ್ಐಎನಿಂದ ಬಂಧಿತನಾಗಿದ್ದ ಮಾದೇಶ ಪೆರುಮಾಳ್ನನ್ನು ಮತಾಂತರ ಮಾಡಿ ಐಎಸಿಸ್ ಸೇರಿಸಿ ಕೆಲಸ ಮಾಡುವಂತೆ ಮಾಡಿದ್ದಳು. ಮಾದೇಶ್ನನ್ನು ಹನಿಟ್ರ್ಯಾಪ್ ಮಾಡಲು 10 ಲಕ್ಷ ಖರ್ಚು ಮಾಡಿದ್ದಳು. ಶಾಕಿಂಗ್ ಅಂದ್ರೆ, ಈವರೆಗೆ ದೀಪ್ತಿ 10 ಯುವಕರನ್ನ ಐಸಿಸ್’ಗೆ ಸೇರಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.
ಇದಷ್ಟೇ ಅಲ್ಲದೆ ಈ ಹಿಂದೆ ದೀಪ್ತಿ ಐಸಿಎಸ್ ಚಟುವಟಿಕೆ ಬೆಂಬಲಿಸುವುದಕ್ಕಾಗಿ ಕಾಶ್ಮೀರಕ್ಕೆ ಭೇಟಿ ನೀಡಿದ್ದಳು. ಐಸಿಸ್ನ ತ್ವರಿತ ಪಿತೂರಿಯ ಕಿಂಗ್ಪಿನ್ ಅಂತಲೂ ಎನ್ಐಎ ಅಧಿಕೃತವಾಗಿ ಮಾಹಿತಿ ನೀಡಿದೆ. ಒಟ್ಟಿನಲ್ಲಿ, ಐಸಿಸ್ ಭಯೋತ್ಪಾದಕಿಯ ಬಣ್ಣ ದಿನದಿಂದ ದಿನಕ್ಕೆ ಬಯಲಾಗುತ್ತಿದೆ. ವೈದ್ಯೆ ದೀಪ್ತಿ ಎನ್ಐಎ ಮುಂದೆ ಸ್ಫೋಟಕ ಮಾಹಿತಿ ಬಿಚ್ಚಿದ್ದಾಳೆ.