- Advertisement -
- Advertisement -


ಮಂಗಳೂರು: ಬೈಕಂಪಾಡಿಯ ಮೀನಕಳಿಯಲ್ಲಿ ರೌಡಿಶೀಟರ್ ಟ್ಯಾಟೂ ರಾಜಾ ಅಲಿಯಾಸ್ ರಾಘವೇಂದ್ರ ಕೊಲೆ ಪ್ರಕರಣದ ಪ್ರಮುಖ ಆರೋಪಿ ನವೀನ್ ಯಾನೆ ಮೈಕಲ್ ನವೀನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈಗ ಬಂಧಿಸಿದ ಆರೋಪಿಗಳ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ.
ಮೈಕಲ್ ನವೀನ್ ಎಂಬಾತನ ಮೇಲೆ ಈಗಾಗಲೇ ಮೂರು ಕೊಲೆ ಪ್ರಕರಣ ಸೇರಿದಂತೆ ಒಟ್ಟು 8 ಕ್ರಿಮಿನಲ್ ಕೇಸುಗಳಿವೆ. ಟ್ಯಾಟೂ ರಾಜಾನ ಕೊಲೆಗೆ ಪ್ರಮುಖ ಸಂಚು ರೂಪಿಸಿ ಮಾರಕಾಯುಧಗಳೊಂದಿಗೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ 12 ಮಂದಿಯನ್ನು ಬಂಧಿಸಲಾಗಿದೆ.
ಇದಕ್ಕೂ ಮುಂಚೆ ಎರಡು ಆರೋಪಿಗಳನ ಮೂಲಕ ಮೂಲ್ಕಿ ಎಂಬಲ್ಲಿ ಇತರರನ್ನು ಬಂಧಿಸಲು ಹೋದಾಗ ಆರೋಪಿಗಳನ್ನು ಪೊಲೀಸರ ಮೇಲೆ ಹಲ್ಲೆಗೈದು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದರು.
- ಇಡ್ಕಿದು ಮನೆಯ ಅಂಗಳದಿಂದ ಕಳವಾಗಿದ್ದ ಬೈಕ್ ಬಿ.ಸಿ.ರೋಡ್ನಲ್ಲಿ ಪತ್ತೆ; ಆರೋಪಿಗಳ ಪತ್ತೆಗೆ ತನಿಖೆ ಚುರುಕು
- CJP ಪ್ರತಿಭಟನೆ ಬೆಂಬಲಿಸಿದರೆನ್ನಲಾದ ಬಿಜೆಪಿ ಸಂಸದೆಯ ಪುತ್ರಿಯ ಇನ್ಸ್ಟಾಗ್ರಾಂ ಖಾತೆ ನಿಷ್ಕ್ರಿಯ? -ವೈರಲ್ ಪೋಸ್ಟ್ಗೆ ಹೊಸ ತಿರುವು
- ಆ್ಯಂಬುಲೆನ್ಸ್ನಲ್ಲೇ ಡ್ರಗ್ಸ್ ಪೂರೈಕೆ: ಬೆಳ್ತಂಗಡಿಯ ಜಲೀಲ್ ಬಾಬಾ ವಿರುದ್ಧ ಸಿಸಿಬಿ ತನಿಖೆ ತೀವ್ರ
- ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಕೆಗೆ ಪ್ರಧಾನಿ ಮೋದಿ ಕರೆ
- ಇಡ್ಕಿದು ಗ್ರಾಮದಲ್ಲಿ ದರೋಡೆ, ಕಳ್ಳತನ


- Advertisement -








