Friday, March 29, 2024
spot_imgspot_img
spot_imgspot_img

ಮಂಗಳೂರು: ಹಳೇ ವೈಷಮ್ಯದಿಂದ ಟ್ಯಾಟೂ ರಾಜಾನ ಕೊಲೆ; ಸಂಚು ಹೆಣೆದಿದ್ದ ರೌಡಿಶೀಟರ್ ಮೈಕಲ್ ನವೀನ್ ಅಂದರ್

- Advertisement -G L Acharya panikkar
- Advertisement -

ಮಂಗಳೂರು: ಬೈಕಂಪಾಡಿಯ ಮೀನಕಳಿಯಲ್ಲಿ ರೌಡಿಶೀಟರ್ ಟ್ಯಾಟೂ ರಾಜಾ ಅಲಿಯಾಸ್‌ ರಾಘವೇಂದ್ರ ಕೊಲೆ ಪ್ರಕರಣದ ಪ್ರಮುಖ ಆರೋಪಿ ನವೀನ್ ಯಾನೆ ಮೈಕಲ್ ನವೀನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈಗ ಬಂಧಿಸಿದ ಆರೋಪಿಗಳ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ.

ಮೈಕಲ್ ನವೀನ್ ಎಂಬಾತನ ಮೇಲೆ ಈಗಾಗಲೇ ಮೂರು ಕೊಲೆ ಪ್ರಕರಣ ಸೇರಿದಂತೆ ಒಟ್ಟು 8 ಕ್ರಿಮಿನಲ್ ಕೇಸುಗಳಿವೆ. ಟ್ಯಾಟೂ ರಾಜಾನ ಕೊಲೆಗೆ ಪ್ರಮುಖ ಸಂಚು ರೂಪಿಸಿ ಮಾರಕಾಯುಧಗಳೊಂದಿಗೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ 12 ಮಂದಿಯನ್ನು ಬಂಧಿಸಲಾಗಿದೆ.

ಇದಕ್ಕೂ ಮುಂಚೆ ಎರಡು ಆರೋಪಿಗಳನ ಮೂಲಕ ಮೂಲ್ಕಿ ಎಂಬಲ್ಲಿ ಇತರರನ್ನು ಬಂಧಿಸಲು ಹೋದಾಗ ಆರೋಪಿಗಳನ್ನು ಪೊಲೀಸರ ಮೇಲೆ ಹಲ್ಲೆಗೈದು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದರು.

- Advertisement -

Related news

error: Content is protected !!