Thursday, May 2, 2024
spot_imgspot_img
spot_imgspot_img

ಮಂಗಳೂರು: ಹಾಡಹಗಲೇ ಕತ್ತಿಯಿಂದ ಇಬ್ಬರಿಗೆ ಹಲ್ಲೆಗೈದ ಯುವಕ; ಸಾರ್ವಜನಿಕರಿಂದ ಗೂಸಾ; ಯುವಕ ಪೊಲೀಸ್ ವಶಕ್ಕೆ

- Advertisement -G L Acharya panikkar
- Advertisement -

ಯುವಕನೋರ್ವ ಇಬ್ಬರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಬಸ್ಸಿಗೆ ಕಲ್ಲು ತೂರಾಟ ನಡೆಸಿದ ಘಟನೆ ನಗರದ ಸುರತ್ಕಲ್‌ನಲ್ಲಿ ನಡೆದಿದೆ. ಸುರತ್ಕಲ್ ಬಳಿಯ ಕಾನದಲ್ಲಿ ಘಟನೆ ನಡೆದಿದ್ದು ಜಾರ್ಖಂಡ್ ಮೂಲದ ಯುವಕ ಈ ಕೃತ್ಯ ಎಸಗಿದ್ದಾನೆ.

ಹುಚ್ಚಾಟ ಮೆರೆದ ಯುವಕನನ್ನು ಜಾರ್ಖಾಂಡ್ ಮೂಲದ ಅತುಲ್ ಕಲ್ಲು (30) ಎಂದು ಪೊಲೀಸರು ಗುರುತಿಸಿದ್ದು ಆತ ಗೋವಾದಿಂದ ಕಾಸರಗೋಡಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈ ವೇಳೆ, ಸುರತ್ಕಲ್ ರೈಲು ನಿಲ್ದಾಣದಲ್ಲಿ ಇಳಿದಿದ್ದು ಸಾರ್ವಜನಿಕರ ಜೊತೆ ಒರಟಾಗಿ ವರ್ತಿಸಿದ್ದಾನೆ. ವೆಂಕಪ್ಪ ಎಂಬ ಸ್ಥಳೀಯ ಒಬ್ಬರನ್ನು ಬೆದರಿಸಿ ಅವರ ಬಳಿಯಿದ್ದ ಕತ್ತಿಯನ್ನು ಪಡೆದಿದ್ದಲ್ಲದೆ, ಅದನ್ನು ಬೀಸುತ್ತಾ ಜನರಲ್ಲಿ ಭಯ ಹುಟ್ಟಿಸಿದ್ದ.

ಇದೇ ವೇಳೆ, ಗ್ಯಾರೇಜ್ ನಡೆಸುತ್ತಿದ್ದ ಇಮ್ರಾನ್ ಎಂಬವರ ಮೇಲೆ ಕತ್ತಿ ಬೀಸಿದ್ದು ಆತನಿಗೆ ಸ್ವಲ್ಪ ಗಾಯವಾಗಿದೆ. ಬಳಿಕ ಸಾರ್ವಜನಿಕರು ಸೇರಿ ವ್ಯಕ್ತಿಯನ್ನು ಹಿಡಿದಿದ್ದು ಎರಡೇಟು ಬಿಗಿದಿದ್ದಾರೆ. ವ್ಯಕ್ತಿ ಮಾನಸಿಕ ಅಸ್ವಸ್ಥನ ರೀತಿ ವರ್ತಿಸುತ್ತಿದ್ದಾನೆ. ಜನರಿಂದ ಪೆಟ್ಟು ತಿಂದಿರುವ ಕಾರಣದಿಂದ ಸುರತ್ಕಲ್ ಪೊಲೀಸರು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

vtv vitla
- Advertisement -

Related news

error: Content is protected !!