- Advertisement -
- Advertisement -
ಮಂಗಳೂರು: ಹಂಪನಕಟ್ಟೆ ಮಿಲಾಗ್ರಿಸ್ ಸಮೀಪ ಜ್ಯುವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಹಾಡಹಗಲೇ ಚೂರಿ ಇರಿಯಲಾಗಿದ್ದು, ಗಾಯಾಳುವನ್ನು ಆಸ್ಪತ್ರೆ ಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.
ಮೃತನನ್ನು 50 ವರ್ಷದ ರಾಘವೇಂದ್ರ ಎಂದು ಗುರುತಿಸಲಾಗಿದೆ.
ನಗರದ ಹಂಪನಕಟ್ಟೆ ಬಲ್ಮಠ ರಸ್ತೆಯಲ್ಲಿರುವ ಮಂಗಳೂರು ಜ್ಯುವೆಲ್ಲರ್ಸ್ನಲ್ಲಿ ಇಂದು ಅಪರಾಹ್ನ ಹೊತ್ತಿಗೆ ಈ ಘಟನೆ ನಡೆದಿದ್ದು ಜ್ಯುವೆಲ್ಲರಿ ಮಾಲಿಕ ಊಟಕ್ಕೆ ಹೊರ ಹೋದಾಗ ಅಂಗಡಿಗೆ ಬಂದ ಮುಸುಕುಧಾರಿ ಅಪರಿಚಿತ ವ್ಯಕ್ತಿ ಸಿಬ್ಬಂದಿ ರಾಘವೇಂದ್ರನಿಗೆ ಚೂರಿ ಇರಿದು ಪರಾರಿಯಾಗಿದ್ದಾನೆ.
- Advertisement -