- Advertisement -
- Advertisement -
ಕಾರವಾರ: ಮದ್ಯ ಸಾಗಾಟ ಮಾಡುತ್ತಿದ್ದ ಲಾರಿಗೆ ಹಿಂದಿನಿಂದ ಬಾಕ್ಸೈಟ್ ಅದಿರು ತುಂಬಿದ್ದ ಲಾರಿ ಡಿಕ್ಕಿ ಹೊಡೆದು ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೋಡೂರು ಗ್ರಾಮದ ಬಳಿ ನಡೆದಿದೆ. ರೂಪೇಶ ಪಾಟೀಲ್(23) ಮೃತಪಟ್ಟ ದುರ್ದೈವಿ.
ಗೋವಾದಿಂದ ಪಾಂಡಿಚೆರಿಗೆ ಕೊಂಡೊಯ್ಯುತಿದ್ದ ಗೋವಾ ಮದ್ಯದ ಲಾರಿಗೆ ಮಂಗಳೂರು ಕಡೆ ತೆರಳುತಿದ್ದ ಬಾಕ್ಸೈಟ್ ಅದಿರು ತುಂಬಿದ ಲಾರಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ.
ಅಪಘಾತದಿಂದ ಏಳು ಲಕ್ಷ ಮೌಲ್ಯದ ಗೋವಾ ಮದ್ಯದ ಬಾಟಲಿಗಳು ರಸ್ತೆಗೆ ಬಿದ್ದು ನಾಶವಾಗಿದೆ. ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -