- Advertisement -
- Advertisement -
ವಿಟ್ಲ: ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ಮತ್ತು ಶ್ರೀ ಹರಿನಾರಾಯಣ ಅಸ್ರಣ್ಣ ಕಟೀಲು ಇವರ ಶುಭಾಶೀರ್ವಾದದೊಂದಿಗೆ ಬಾಲ ಕಲಾವಿದೆ ಮನಸ್ವಿ ಆರ್ ಶೆಟ್ಟಿ ಗಾಯನದಲ್ಲಿ ಮೂಡಿ ಬಂದ ಕಟೀಲು ಶ್ರೀ ದೇವಿಯ ಸುಮಧುರವಾದ ತುಳು ಭಕ್ತಿ ಗೀತೆ ಕಣ್ಣ್ ಬುಲಾಲೆ ಅಮ್ಮ.. ಒರ ತೂಲೆ ಅಮ್ಮ ಎಂಬ ಹಾಡು ಮನಸ್ವಿ ಆರ್ ಶೆಟ್ಟಿ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.
ಇವರು ಮುಳಿಯ ತಾಳಿಪಡ್ಪು ರಾಜಶೇಖರ್ ಶೆಟ್ಟಿ ಮತ್ತು ದಿವ್ಯ ದಂಪತಿಯ ಪುತ್ರಿ, ವಿಟ್ಲ ಜೇಸಿಸ್ ಶಾಲೆಯ ವಿದ್ಯಾರ್ಥಿನಿ. ಗಾನಸಿರಿ ಕಿರಣ್ ಕುಮಾರ್, ಗೀತಾ ಸಾರಡ್ಕ ಹಾಗೂ ರವಿಕಿರಣ್ ಮಂಗಳೂರು ಇವರ ಶಿಷ್ಯೆಯಾಗಿರುತ್ತಾರೆ.
- Advertisement -