Monday, May 6, 2024
spot_imgspot_img
spot_imgspot_img

ಮಾರಕಾಸ್ತ್ರ ಹಿಡಿದು ಸಾರ್ವಜನಿಕರನ್ನು ಬೆದರಿಸುತ್ತಿದ್ದ ದುಷ್ಕರ್ಮಿ; ಕಾಲಿಗೆ ಶೂಟ್‌ ಮಾಡಿ ಬಂಧಿಸಿದ ಪೊಲೀಸರು..!!

- Advertisement -G L Acharya panikkar
- Advertisement -

ಕಲಬುರಗಿ : ಸಾರ್ವಜನಿಕ ಸ್ಥಳದಲ್ಲಿ ಕೈಯಲ್ಲಿ ಚಾಕು ಹಿಡಿದು ಜನರನ್ನು ಬೆದರಿಸುತ್ತಿದ್ದ ದುಷ್ಕರ್ಮಿಯೊಬ್ಬನ ಮೇಲೆ ಪೊಲೀಸರು ಗುಂಡು ಹಾರಿಸಿ, ಆತನನ್ನು ಬಂಧಿಸಿದ ಘಟನೆ ಕಲಬುರಗಿ ನಗರದ ಸೂಪರ್ ಮಾರ್ಕೆಟ್‌ನಲ್ಲಿ ನಡೆದಿದೆ.

ಜಾಫರ್ ಎಂಬಾತ ಸುಮಾರು ಒಂದು ಗಂಟೆ ಕಾಲ ಕೈಯಲ್ಲಿ ಚೂರಿ ಹಿಡಿದು ರಸ್ತೆಯಲ್ಲಿ ತಿರುಗಾಡುತ್ತಾ ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದ. ಎನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು, ಶರಣಾಗುವಂತೆ ಸೂಚಿಸಿದರೂ ಆತ ಪೊಲೀಸರ ಮಾತಿಗೆ ಕಿವಿಗೊಡಲಿಲ್ಲ. ಪೊಲೀಸರು ಬುದ್ಧಿಮಾತು ಹೇಳಿದರು ಅವರ ವಿರುದ್ಧವೇ ಮಾರಕಾಸ್ತ್ರವನ್ನು ಝಳಪಿಸಿ ದಾದಾಗಿರಿ ತೋರಿದ್ದ. ಕೊನೆಗೆ ಪೊಲೀಸರು ವಿಧಿ ಇಲ್ಲದೇ ಮೂರು ಸುತ್ತು ಗುಂಡು ಹಾರಿಸಿ, ಕೊನೆಯ ಗುಂಡು ಆತನ ಕಾಲಿಗೆ ತಗುಲಿದರಿಂದ ಅಲ್ಲೇ ಕುಸಿದು ಬಿದ್ದಿದ್ದಾನೆ.

ಕೂಡಲೇ ಆರೋಪಿಯನ್ನು ಸುತ್ತುವರೆದ ಪೊಲೀಸರು ಆತನಿಗೆ ಲಾರಿಯಿಂದ ಥಳಿಸಿ, ಕಾಲಿಗೆ ಗುಂಡು ತಗುಲಿ ಗಾಯಗೊಂಡ ಆರೋಪಿಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!