- Advertisement -
- Advertisement -
ಮುಡಿಪು: ಬಾಲಕನೋರ್ವ ಕಾರಿನಡಿಗೆ ಬಿದ್ದು ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ಮುಡಿಪು ಸಮೀಪದ ಇರಾ ಬಳಿ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗಾಯಾಳು ಬಾಲಕ ಮೈಸೂರು ಮೂಲದ ಇಂಜಿನಿಯರ್ ಆಗಿರುವ ಶಿವಾನಂದ್ ಎಂಬವರ ಪುತ್ರ ಮನೋಜ್ (12) ಎನ್ನಲಾಗಿದೆ.
ಆಟವಾಡಲೆಂದು ಮನೆಯಿಂದ ಹೊರ ಓಡಿಬಂದ ಬಾಲಕ ರಸ್ತೆ ದಾಟುವಾಗ ವೇಗವಾಗಿ ಬರುತ್ತಿದ್ದ ಕಾರು ಆತನ ಮೇಲೆ ಹರಿದು ಹೋಗಿದೆ. ಬಾಲಕನ ಎಡಕಾಲು ಮುರಿತಕ್ಕೊಳಗಾಗಿದೆ. ಪ್ರಾಣಾಪಾಯದಿಂದ ಪವಾಡಸದೃಶವಾಗಿ ಪಾರಾಗಿದ್ದಾನೆ.
- Advertisement -