Sunday, May 5, 2024
spot_imgspot_img
spot_imgspot_img

ಮೈಸೂರು ದಸರಾ ಗಜಪಡೆಯಲ್ಲಿ ಹತ್ತು ವರ್ಷ ಭಾಗಿಯಾಗಿದ್ದ ಆನೆ ಕಾಡಾನೆ ದಾಳಿಯಿಂದ ದುರಂತ ಸಾವು

- Advertisement -G L Acharya panikkar
- Advertisement -

ಮೈಸೂರು: “ಭವಿಷ್ಯದ ಅಂಬಾರಿ ಆನೆ” ಎಂದು ಕರೆಸಿಕೊಳ್ಳುವ ಆನೆ ಗೋಪಾಲಸ್ವಾಮಿ ಕಾಡಾನೆ ದಾಳಿಯಿಂದಾಗಿ ಸಾವನ್ನಪ್ಪಿದ ಘಟನೆ ಬುಧವಾರದಂದು ನಡೆದಿದೆ. ದಸರಾ ಆನೆಗಳಲ್ಲಿ ಒಂದಾಗಿರುವ 39 ವರ್ಷದ ಗೋಪಾಲಸ್ವಾಮಿ ಬುಧವಾರ ಕೊನೆಯುಸಿರೆಳೆದಿದೆ. ಗೋಪಾಲಸ್ವಾಮಿ ಆನೆಗೆ ಸಕಲ ಗೌರವದೊಂದಿಗೆ ಧಾರ್ಮಿಕ ವಿಧಿವಿಧಾನದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಗೋಪಾಲಸ್ವಾಮಿ ಆನೆ ಮಂಗಳವಾರ ನಾಗರಹೊಳೆ ಮತ್ತಿಗೋಡು ಆನೆ ಶಿಬಿರದಲ್ಲಿ ಕಾಡಿಗೆ ಮೇಯಲು ಹೋಗಿದ್ದಾಗ ಸಂದರ್ಭದಲ್ಲಿ ಕಾಡಾನೆಗಳು ದಾಳಿ ನಡೆಸಿವೆ ಎಂದು ವರದಿಯಾಗಿದೆ.

ಈ ಆನೆಯನ್ನು 2009ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಎತ್ತೂರಿನಲ್ಲಿ ಸೆರೆ ಹಿಡಿಯಲಾಗಿತ್ತು. ಸೌಮ್ಯ ಸ್ವಭಾವದ ಈ ಆನೆ ಕಳೆದ ಹತ್ತು ವರ್ಷಗಳಿಂದ ದಸರಾ ಉತ್ಸವದಲ್ಲಿ ಭಾಗವಹಿಸುತ್ತಿತ್ತು.

- Advertisement -

Related news

error: Content is protected !!