Tuesday, May 7, 2024
spot_imgspot_img
spot_imgspot_img

ಯುದ್ಧಭೂಮಿ ಉಕ್ರೇನ್​​ಗೆ ತೆರಳಲಿದ್ದಾರೆ ಈ ನಾಲ್ವರು ಕೇಂದ್ರ ಸಚಿವರು; ಪ್ರಧಾನಿ ನರೇಂದ್ರ ಮೋದಿಯವರ ತುರ್ತು ಸಭೆಯಲ್ಲಿ ನಿರ್ಣಯ

- Advertisement -G L Acharya panikkar
- Advertisement -

ರಷ್ಯಾ-ಉಕ್ರೇನ್​ ಯುದ್ಧ ತೀವ್ರತೆ ದಿನೇದಿನೆ ಹೆಚ್ಚುತ್ತಿರುವ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ಕೇಂದ್ರ ಸಚಿವರು, ಉನ್ನತ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಉಕ್ರೇನ್​​ನಲ್ಲಿ ಉಂಟಾದ ಯುದ್ಧ ಪರಿಸ್ಥಿತಿ ಮತ್ತು ಅಲ್ಲಿ ಸಿಲುಕಿರುವ ಭಾರತದ ವಿದ್ಯಾರ್ಥಿಗಳು, ಅವರ ರಕ್ಷಣಾ ಕಾರ್ಯಾಚರಣೆ ಬಗ್ಗೆ ಪರಿಶೀಲನೆ, ಚರ್ಚೆ ನಡೆಸಿದ್ದು, ಮುಂದೆ ಭಾರತ ಸರ್ಕಾರ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಮಾರ್ಗದರ್ಶನ ಮಾಡಿದ್ದಾರೆ. ಉಕ್ರೇನ್​​ನಲ್ಲಿರುವ ಭಾರತದ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದ್ದರೂ ಇನ್ನೂ ಸಾವಿರಾರು ಮಂದಿ ಅಲ್ಲಿಯೇ ಸಿಲುಕಿದ್ದಾರೆ.

ಇನ್ನು ತಾಯ್ನಾಡಿಗೆ ತೆರಳಲು ಪೋಲ್ಯಾಂಡ್​, ರೊಮೇನಿಯಾ ಗಡಿಗಳಿಗೆ ಬರುವ ಭಾರತೀಯರ ಮೇಲೆ ಕೂಡ ರಷ್ಯಾ ಸೈನಿಕರು ಕ್ರೌರ್ಯ ತೋರುತ್ತಿದ್ದಾರೆ. ಅದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ, ಉಕ್ರೇನ್​ನಿಂದ ಭಾರತೀಯರನ್ನು ಆದಷ್ಟು ತ್ವರಿತವಾಗಿ ಸ್ವದೇಶಕ್ಕೆ ಕರೆತರುವ ಸಲುವಾಗಿ, ಕೇಂದ್ರ ಸಚಿವರಾದ ಹರ್ದೀಪ್​ ಸಿಂಗ್​ ಪುರಿ, ಜ್ಯೋತಿರಾದಿತ್ಯ ಸಿಂಧ್ಯಾ, ಕಿರಣ್​ ರಿಜಿಜು, ಜನರಲ್​ ವಿ.ಕೆ.ಸಿಂಗ್​​ ಶೀಘ್ರದಲ್ಲೇ ಉಕ್ರೇನ್​ಗೆ ತೆರಳಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

vtv vitla
vtv vitla

ಉಕ್ರೇನ್​​ನಿಂದ ಭಾರತಕ್ಕೆ ಮೂರು ಬ್ಯಾಚ್​​ಗಳಲ್ಲಿ ಅಂದರೆ 1200 ಭಾರತೀಯ ವಿದ್ಯಾರ್ಥಿಗಳನ್ನೂ ಕರೆತರಲಾಗಿದ್ದರೂ ಇನ್ನೂ ಸುಮಾರು 16 ಸಾವಿರ ವಿದ್ಯಾರ್ಥಿಗಳು ಅಲ್ಲಿ ಸಿಲುಕಿದ್ದಾರೆ. ಅವರು ಬಂಕರ್​ಗಳಲ್ಲಿ, ಹಾಸ್ಟೆಲ್​ ಬೇಸ್​ಮೆಂಟ್​ಗಳಲ್ಲಿ ರಕ್ಷಣೆ ಪಡೆದಿದ್ದಾರೆ. ಊಟ-ತಿಂಡಿ-ನೀರು ಸಿಗದೆ ಪರದಾಡುತ್ತಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ. ಈ ಮಧ್ಯೆ ರಷ್ಯಾ ಸೇನೆಯ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಭಾರತೀಯ ವಿದ್ಯಾರ್ಥಿಗಳ ವಿಡಿಯೋವನ್ನು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸೇರಿ ಹಲವರು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಭಾನುವಾರ ಕೂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಸುಮಾರು ಎರಡು ತಾಸುಗಳ ದೀರ್ಘಾವಧಿ ಸಭೆ ನಡೆಸಿದ್ದರು. ಉಕ್ರೇನ್​​ನ ಪರಿಸ್ಥಿತಿ, ಭಾರತೀಯರ ಸುರಕ್ಷತೆ ಬಗ್ಗೆ ಚರ್ಚಿಸಿದ್ದರು. ಸದ್ಯ ಉಕ್ರೇನ್​​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯೇ ನಮ್ಮ ಆದ್ಯತೆ ಎಂದು ಹೇಳಿದ್ದರು. ನಿನ್ನೆ ಉತ್ತರ ಪ್ರದೇಶದಲ್ಲಿ ಚುನಾವಣೆ ರ್ಯಾಲಿ ನಡೆಸಿದ ಬಳಿಕ ಇಂದು ಬೆಳಗ್ಗೆ ಮತ್ತೊಮ್ಮೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಇಂದಿನ ಸಭೆಯಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್​.ಜೈಶಂಕರ್​, ಈ ಸಚಿವಾಲಯದ ಕಾರ್ಯದರ್ಶಿ ಹರ್ಷವರ್ಧನ್​ ಶ್ರಿಂಗ್ಲಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್​ ರಿಜಿಜು ಇತರರು ಇದ್ದರು.

- Advertisement -

Related news

error: Content is protected !!