Thursday, May 2, 2024
spot_imgspot_img
spot_imgspot_img

ವಿಟ್ಲ: ಅಂಗನವಾಡಿಯಲ್ಲಿ ಕಾಣಿಸಿಕೊಂಡ ನಾಗರಹಾವು.!

- Advertisement -G L Acharya panikkar
- Advertisement -

ವಿಟ್ಲ: ಪುಟ್ಟ ಮಕ್ಕಳು ಚಿಲಿಪಿಲಿಗುಡುವ ಅಂಗನವಾಡಿ ಕೇಂದ್ರಕ್ಕೆ ನಾಗರ ಹಾವೊಂದು ನುಗ್ಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಕೇಪು ಗ್ರಾಮದ ಮೈರ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ. ಬಳಿಕ ಸಮಾಜ ಸೇವಕ ವಿಟ್ಲದ ಮುರಳೀಧರ ಎಂಬವರು ಹಾವನ್ನು ರಕ್ಷಣೆ ಮಾಡಿದ್ದಾರೆ.

ಇಂದು ಮಧ್ಯಾಹ್ನ ಸುಮಾರಿಗೆ ನಾಗರ ಹಾವೊಂದು ಕೇಪು ಗ್ರಾಮದ ಮೈರ ಅಂಗನವಾಡಿ ಕೇಂದ್ರಕ್ಕೆ ನುಗ್ಗಿತ್ತು, ಹಾವನ್ನು ಕಂಡ ಮಕ್ಕಳು ಭಯಭೀತಗೊಂಡಿದ್ದರು. ಅಂಗನವಾಡಿ ಶಿಕ್ಷಕಿ ಅನುಸೂಯ .ಎಂ. , ಕೂಡಲೇ ಸಮಾಜ ಸೇವಕ, ಹವ್ಯಾಸಿ ಉರಗ ತಜ್ಞ ಮುರಳೀಧರ ವಿಟ್ಲ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಮುರಳಿ ಅವರು ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ನಾಗರಹಾವನ್ನು ಹಿಡಿದು ರಕ್ಷಿಸಿ, ಪುಟಾಣಿಗಳ ಹಾಗೂ ಅಂಗನವಾಡಿ ಶಿಕ್ಷಕಿಯರ ಆತಂಕವನ್ನು ದೂರ ಮಾಡಿದರು.

- Advertisement -

Related news

error: Content is protected !!