Monday, April 29, 2024
spot_imgspot_img
spot_imgspot_img

ವಿಟ್ಲ: ಅಡ್ಯನಡ್ಕ ವಾರಣಾಸಿ ಪಾರ್ಮ್ ನಲ್ಲಿ ವೈದ್ಯೆ ಕೆರೆಗೆ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ 2 ತಿಂಗಳ ಬಳಿಕ ಮತ್ತೆ ಮರುಜೀವ; ಈಜು ತರಬೇತುದಾರ ಪಾರ್ಥಾ ವಾರಣಾಸಿ ವಿರುದ್ಧ ದೂರು ದಾಖಲಿಸಿದ ಮೃತ ವೈದ್ಯೆಯ ತಾಯಿ; ನಿಜವಾದ ವಿಟಿವಿ ವರದಿ

- Advertisement -G L Acharya panikkar
- Advertisement -

ವಿಟ್ಲ: ಅಡ್ಯನಡ್ಕ ವಾರಣಾಸಿ ಪಾರ್ಮ್ ನಲ್ಲಿ ಕೆರೆಗೆ ಬಿದ್ದು ಸಾವನ್ನಪ್ಪಿದ ಪ್ರಕರಣದಲ್ಲಿ ಈಜು ತರಬೇತುದಾರರ ನಿರ್ಲಕ್ಷ್ಯ ಇದೆ ಎಂಬ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಪು ಗ್ರಾಮದ ಅಡ್ಯನಡ್ಕ ವಾರಣಾಸಿ ಪಾರ್ಮ್ ನ ಪಾರ್ಥಾ ವಾರಣಾಸಿ ಆರೋಪಿಯಾಗಿದ್ದಾರೆ. ಸೆ.12ರಂದು ಕೃಷಿ ಅಧ್ಯಯನಕ್ಕೆಂದು ಆಗಮಿಸಿದ್ದ ಮೈಝಿ ಕರೋಲ್ ಫೆರ್ನಾಂಡೀಸ್ (31) ಸೆ.14ರಂದು ನೀರಾವರಿ ಕೆರೆಗೆ ಬಿದ್ದು, ಮೃತ ಪಟ್ಟಿದ್ದರು. ಇದೊಂದು ಅಸಹಜ ಮರಣ ಅಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಈ ಹಿಂದೆಯೂ ಕೇಳಿಬಂದಿತ್ತು.

ಅಡ್ಯನಡ್ಕ ಹೇಳಿ ಕೇಳಿ ಕೇರಳ ಕರ್ನಾಟಕ ಗಡಿ ಪ್ರದೇಶ. ಇಲ್ಲಿ ಪೊಲೀಸರು ಎಷ್ಟೇ ಕಣ್ಗಾವಲು ಇಟ್ಟರೂ ಡ್ರಗ್ಸ್ ಮಾಫಿಯಾ ನಡೆಯುತ್ತಿದೆ ಎಂಬುವುದು ಇಲ್ಲಿನ ಸ್ಥಳೀಯರ ಅಭಿಪ್ರಾಯವಾಗಿದೆ.

ವಾರಣಾಸಿ ಫಾರ್ಮ್ ಗೆ ಹೆಚ್ಚಾಗಿ ವಿದೇಶಿ ಪ್ರಜೆಗಳು ಮೋಜಿ ಮಸ್ತಿಗೆಂದು ಬರುತ್ತಾರೆ. ಅವರು ಡ್ರಗ್ಸ್ ಸೇವಿಸುತ್ತಾರೆ. ನಶೆ ಅಮಲಿನಲ್ಲಿ ಈ ಹಿಂದೆಯೂ ಇದೇ ಫಾರ್ಮ್ ನಲ್ಲಿ ಹಲವು ವಿದೇಶಿ ಸೇರಿದಂತೆ ಬೇರೆ ಬೇರೆ ಅವರು ಇರುವುದನ್ನು ಸ್ಥಳೀಯರು ಗಮನಿಸಿದ್ದರು ಎನ್ನಲಾಗಿದೆ. ಈ ಸಾವು ಸಹಜವಲ್ಲ. ಇದರ ಹಿಂದೆ ಡ್ರಗ್ಸ್ ಮಾಫಿಯಾದ ಶಂಕೆಯ ಹುತ್ತವನ್ನು ಬೆಳೆಸಿದೆ.

ಅಷ್ಟು ಮಾತ್ರವಲ್ಲದೆ ಈ ಫಾರ್ಮ್ನ ಒಳಗಡೆ ಸ್ಥಳೀಯರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇದರಿಂದಾಗಿ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿತ್ತು. ಇನ್ನು ಈ ಬಗ್ಗೆ ಮೃತಳ ಸಹೋದರಿ ಟ್ರೆಸ್ಟ ಡಯಾನ ಫೆರ್ನೆಂಡಿಸ್ ವಿಟ್ಲ ಪೊಲೀಸ್ ಠಾಣೆಗೆ ಆಗಮಿಸಿ ಮೃತರು ಈಜಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ ಹೊರತು ಮೃತರ ಸಾವಿನಲ್ಲಿ ಬೇರೆ ಯಾವುದೇ ರೀತಿಯ ಸಂಶಯವಿರುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಅಲ್ಲಿನ ಸ್ಥಳೀಯರು ವಾರಣಾಸಿ ಫಾರ್ಮ್ ನ ಬಗ್ಗೆ ಮಾತನಾಡಿಕೊಳ್ಳುತ್ತಿರುವುದು ನಿಜಕ್ಕೂ ಅನುಮಾನಕ್ಕೆ ಇನ್ನಷ್ಟು ದಾರಿ ಮಾಡಿಕೊಟ್ಟಿದ್ದು, ಇದೀಗ ಆ ಅನುಮಾನ ನಿಜವಾಗಿದೆ.

ಈಜು ತರಬೇತುದಾರ ಪಾರ್ಥನೇ ಈ ಸಾವಿನ ನಿಜವಾದ ಆರೋಪಿ. ಹಣದಾಸೆಗಾಗಿ ಡ್ರಗ್ಸ್ ಮಾಫಿಯಾದ ಜೊತೆಗೆ ನಂಟು ಬೆಳೆಸಿದ್ದ ಆತ ಫಾರ್ಮ್ ಹೌಸ್ ನ ಒಳಗಡೆ ಸ್ಥಳೀಯರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದ್ದರೂ ಕೂಡಾ ಈತ ಆಕೆಯನ್ನು ಒಳಗಡೆ ಬಿಟ್ಟಿದ್ದು, ಈ ಸಾವಿನಲ್ಲಿ ಆತನ ಕೈವಾಡವಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಎರಡು ತಿಂಗಳ ಬಳಿಕ ಪ್ರಕರಣಕ್ಕೆ ಮರು ಜೀವ ಬಂದಿದ್ದು, ಕೆರೆಗೆ ಸೂಕ್ತ ತಡೆಗೋಡೆ, ಬೇಲಿಯನ್ನು ನಿರ್ಮಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ 15 ಅಡಿ ಆಳದ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಈ ಸಾವಿನಲ್ಲಿ ಸಂಶಯವಿದೆ ಎಂದು ಮೆಬಲ್ ಫೆರ್ನಾಂಡೀಸ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ವಿಟಿವಿಯು ಪಾರ್ಥನ ವಿರುದ್ಧ ಸಂಶಯ ವ್ಯಕ್ತಪಡಿಸಿ ವರದಿ ಬಿತ್ತರಿಸಿದ್ದು, ಇದೀಗ ವಿಟಿವಿಯ ವರದಿಯು ನಿಜವಾಗಿದೆ.

vtv vitla
vtv vitla

- Advertisement -

Related news

error: Content is protected !!