- Advertisement -
- Advertisement -
ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಅಮೈ ಪಣೆಮಜಲು ಧೂಮವತಿ ದೈವಸ್ಥಾನ ಹಾಗೂ ಅಮೈ ಭಂಡಾರದ ಮನೆಯಲ್ಲಿ ಶ್ರೀ ಧೂಮವತಿ ಪರಿವಾರ ದೈವಗಳ ಅನುಜ್ಞಾ ಕಲಶವು ವೇದಮೂರ್ತಿ ರಘುರಾಮ ತಂತ್ರಿ ಕುಂಟುಕುಡೇಲು ಇವರ ನೇತೃತ್ವದಲ್ಲಿ ನಡೆಯಿತು.
ಬೆಳಗ್ಗಿನಿಂದ ಹವನ, ಅನುಜ್ಞಾ ಕಲಶ ಹಾಗೂ ದೈವಗಳಿಗೆ ತಂಬಿಲ ಸೇವೆ ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.
ಈ ವೇಳೆ ದೈವಸ್ಥಾನ ಸಮಿತಿಯ ಅಧ್ಯಕ್ಷ ವಸಂತ ಕುಮಾರ್ ಅಮೈ, ಆಡಳಿತ ಮುಕೇಸ್ತರರು ಪ್ರಭಾಕರ ಗೌಡ ಅಮೈ, ಗೌರವಾಧ್ಯಕ್ಷ ಕೆ ಟಿ ವೆಂಕಟೇಶ್ವರ ನೂಜಿ, ಕಾರ್ಯದರ್ಶಿ ಜಯಾನಂದ ರೆಂಜೆಮಾರ್, ಕೋಶಾಧಿಕಾರಿ ಜಯಕರ ಅಮೈ ಮತ್ತು ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
- Advertisement -