Friday, April 26, 2024
spot_imgspot_img
spot_imgspot_img

ವಿಟ್ಲ: ದುಡಿಯೋಣ ಬಾ ಅಭಿಯಾನದಡಿಯಲ್ಲಿ ವಿಟ್ಲ ಮುಡ್ನೂರು ಕಂಬಳಬೆಟ್ಟುವಿನಲ್ಲಿ ತೋಡಿನ ಹೂಳೆತ್ತುವ ಕಾಮಗಾರಿಗೆ ಚಾಲನೆ

- Advertisement -G L Acharya panikkar
- Advertisement -

ವಿಟ್ಲ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಅಭಿಯಾನ ಯೋಜನೆಯ ದುಡಿಯೋಣ ಬಾ ಅಭಿಯಾನದಡಿ ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅಮೈ ಕಂಬಳಬೆಟ್ಟುವಿನಲ್ಲಿ ತೋಡಿನ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಯಿತು.

ಕಾಮಗಾರಿಯನ್ನು ಪಂಚಾಯತ್‌ನ ಚಿಗುರು ಸಂಜೀವಿನಿ ಒಕ್ಕೂಟದ ಒಟ್ಟು 8 ಸದಸ್ಯರು ಕೆಲಸ ಮಾಡಲಿದ್ದು ಈ ಮೂಲಕ ಮಹಿಳಾ ಕಾರ್ಮಿಕರಿಗೆ ಉತ್ತೇಜನ ನೀಡಲಾಗುತ್ತಿದೆ. ಉದ್ಯೋಗ ಕಾತರಿ ಯೋಜನೆಯಡಿ ಈ ವರ್ಷ ಕೂಲಿ ಮೊತ್ತ 309 ಆಗಿದ್ದು ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಸಹಾಯವಾಗಲಿದೆ.

ಪಂಚಾಯತ್‌ ವ್ಯಾಪ್ತಿಯಲ್ಲಿ ಇರುವ ಮಹಿಳೆಯರು ಈ ಯೋಜನೆಯಲ್ಲಿ ಭಾಗವಹಿಸಿದ್ದು ದುಡಿಯೋಣ ಬಾ ಅಭಿಯಾನದಡಿ ಅಂತರ್ಜಲ ವೃದ್ಧಿಗೆ ಸಂಬಂಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ತೋಡಿನ ಹೂಳೆತ್ತುವುದರಿಂದ ನೀರು ಹರಿದು ಸರಾಗವಾಗಲಿದೆ. ಅಕ್ಕಪಕ್ಕದ ತೋಟ ಗದ್ದೆಗಳಿಗೆ ನೀರು ಹೋಗುವುದನ್ನು ತಡೆಯಬಹುದಾಗಿದೆ. ಈ ಯೋಜನೆ ಯಶಸ್ವಿಯಾಗಿ ನಡೆಯಲಿದೆ.

- Advertisement -

Related news

error: Content is protected !!