Saturday, April 27, 2024
spot_imgspot_img
spot_imgspot_img

ವಿಟ್ಲ: ಕುಲಾಲ ಸಂಘ (ರಿ ) ಇದರ ವಾರ್ಷಿಕ ಮಹಾಸಭೆ ಹಾಗೂ ಭಜನಾ ಕಾರ್ಯಕ್ರಮ

- Advertisement -G L Acharya panikkar
- Advertisement -

ಕುಲಾಲ ಸಂಘ (ರಿ) ವಿಟ್ಲ, ಸಮುದಾಯ ಆರೋಗ್ಯ ಕೇಂದ್ರದ ಬಳಿ ಇದರ ವತಿಯಿಂದ ನವರಾತ್ರಿ ಭಜನಾ ಕಾರ್ಯಕ್ರಮವು ಅಕ್ಟೋಬರ್ 2 ರಂದು ಕುಲಾಲ ಸಮಾಜದ ಬಾಂಧವರು ಸೇರಿಕೊಂಡು ನಡೆಸಲಾಯಿತು.ಬಳಿಕ
ಕುಲಾಲ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಬಿ.ಕೆ ಬಾಬು ರವರ ಅಧ್ಯಕ್ಷತೆಯಲ್ಲಿ ನಡೆಯಿತು.

2021-22ರ ಸಾಲಿನ ಲೆಕ್ಕಪತ್ರವನ್ನು ಸಂಘದ ಕೋಶಾಧಿಕಾರಿ ಅಚ್ಚುತ ಕಟ್ಟೆ ಮಂಡಿಸಿದರು. ಮುಂದಿನ ವರ್ಷದಲ್ಲಿ ನಡೆಯಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಕಾರ್ಯದರ್ಶಿ ರಮೇಶ್ ಕುಲಾಲ್ ನೆಕ್ಕರೆಕಾನ ಅಜ್ಜಿನಡ್ಕ, ಕಟ್ಟಡ ಸಮಿತಿ ಅಧ್ಯಕ್ಷ ರಮನಾಥ್ ವಿಟ್ಲ ಉಪಸ್ಥಿತರಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಸುಚಿತ್ರ ರಮನಾಥ್ ವಿಟ್ಲ ವರದಿ ವಾಚಿಸಿದರು. ವಾರಿಜ ಬಾಬು ಮೂಲ್ಯ ಸ್ವಾಗತಿಸಿ, ಸುರೇಶ್ ಕಲಾರಸಿಕ ನಿರೂಪಿಸಿದರು.

ಬಳಿಕ ನಡೆದ 2022 ರಿಂದ 2024ರ ಕಾರ್ಯಕಾರಿ ಸಮಿತಿಯ ಆಯ್ಕೆಯು ನಡೆಯಿತು.ಅಧ್ಯಕ್ಷರಾಗಿ ಬಿ.ಕೆ ಬಾಬು ರವರು ಎರಡನೇ ಬಾರಿಗೆ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ವೀರಪ್ಪ ಮೂಲ್ಯ ಪುಣಚ ಉಪಾಧ್ಯಕ್ಷರಾಗಿ ರಾಧಾಕೃಷ್ಣ ಎ ಹಾಗೂ ನಾರಾಯಣ ಪುಣಚ, ಕಾರ್ಯದರ್ಶಿಗಳಾಗಿ ರಮೇಶ ಪುಣಚ ನೆಕ್ಕರೆಕಾನ,ಜೊತೆ ಕಾರ್ಯದರ್ಶಿಗಳಾಗಿ ಅರುಣಾಕರ ಪೆರುವಾಜೆ ಕೋಶಾಧಿಕಾರಿಗಳಾಗಿ ಅಚ್ಚುತ ಕಟ್ಟೆ, ಸಂಘಟನಾ ಕಾರ್ಯದರ್ಶಿ ಶೀನ ಮೂಲ್ಯ ಅಡ್ಯನಡ್ಕ, ಕ್ರೀಡಾ ಕಾರ್ಯದರ್ಶಿ ಪ್ರವೀಣ್ ಚಂದಳಿಕೆ, ಸಾಂಸ್ಕೃತಿಕ ಕಾರ್ಯದರ್ಶಿ ಸುರೇಶ್ ಕಲಾರಸಿಕ ಹಾಗೂ 15 ಜನ ಸದಸ್ಯರನ್ನು ಒಳಗೊಂಡಂತೆ ರಚಿಸಲಾಯಿತು.

- Advertisement -

Related news

error: Content is protected !!