Sunday, May 19, 2024
spot_imgspot_img
spot_imgspot_img

ವಿಟ್ಲ: ಖಾಸಗಿ ಬಸ್‌ಸ್ಟ್ಯಾಂಡಿನಲ್ಲಿ ಬಸ್‌ ಡ್ರೈವರ್‌ಗಳ ಮಧ್ಯೆ ಹೊಡೆದಾಟ ; ಮೂವರ ವಿರುದ್ಧ FIR ದಾಖಲು

- Advertisement -G L Acharya panikkar
- Advertisement -

ವಿಟ್ಲ: ಬಸ್‌ಸ್ಟ್ಯಾಂಡ್‌ನಲ್ಲಿ ಖಾಸಗಿ ಬಸ್‌ ಡ್ರೈವರ್‌ಗಳ ಮಧ್ಯೆ ಹೊಡೆದಾಟ ನಡೆದ ಘಟನೆ ಇಂದು ಬೆಳಿಗ್ಗೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು FIR ದಾಖಲಿಸಿದ್ದರೆ.

ಆರೋಪಿಗಳನ್ನು ಚಿಂತನ್ (32) , ಹೊನ್ನಯ್ಯ (32), ಯತಿರಾಜ್ (36) ಎನ್ನಲಾಗಿದೆ.

ಘಟನೆಯ ವಿವರ:

ವಿಟ್ಲ ಬಸ್‌ಸ್ಟ್ಯಾಂಡ್‌ನಲ್ಲಿ ಖಾಸಗಿ ಬಸ್‌ ಡ್ರೈವರ್‌ಗಳ ಮಧ್ಯೆ ಹೊಡೆದಾಟ ನಡೆದಿದ್ದು, ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ವಿಟ್ಲ ಬಸ್‌ ಸ್ಟ್ಯಾಂಡ್‌ನಲ್ಲೆ ಟೈಮಿಂಗ್ಸ್‌ ವಿಚಾರದಲ್ಲಿ ಮಣಿಕಂಠ ಬಸ್‌ ಮತ್ತು ಮಹೇಶ್‌ ಬಸ್‌ ಡ್ರೈವರ್‌ಗಳು ಇಂದು ಬೆಳಿಗ್ಗೆ ಹೊಡೆದಾಡಿಕೊಂಡ ಘಟನೆ ನಡೆದಿತ್ತು. ಪ್ರಯಾಣಿಕರು ಬಸ್‌ನಲ್ಲಿ ಇರುವಾಗಲೇ ಸಾರ್ವಜನಿಕರ ಎದುರಲ್ಲೇ ಹೊಡೆದಾಡಿಕೊಂಡಿದ್ದಾರೆ. ಮಾಹಿತಿ ತಿಳಿದ ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೂವರನ್ನು ವಶಕ್ಕೆ ಪಡೆದಿದ್ದರು.

- Advertisement -

Related news

error: Content is protected !!