- Advertisement -
- Advertisement -
ಕುಂದಾಪುರ: ಅಕ್ರಮವಾಗಿ ಎರಡು ಲಾರಿಗಳಲ್ಲಿ ಸಾಗಾಟ ಮಾಡುತ್ತಿದ್ದ ಕೋಣದ ಮರಿಗಳನ್ನು ರಕ್ಷಣೆ ಮಾಡಿ, ಆರೋಪಿಗಳನ್ನ ಬಂಧಿಸಿದ ಘಟನೆ ಉಡುಪಿ ಜಿಲ್ಲೆಯ ಅಮವಾಸ್ಯೆ ಎಂಬಲ್ಲಿ ನಡೆದಿದೆ.
ಮೆಹಬೂಬ್, ಬಾಪು ಸಾಹೇಬ್, ಆಸಿಫ್ ಹಾಗೂ ಇಮ್ರಾನ್ ಬಂಧಿತ ಆರೋಪಿಗಳು.. ಬಂಧಿತರು ದಾವಣಗೆರೆ ಹಾಗೂ ಬೆಳಗಾವಿ ಮೂಲದರಾಗಿದ್ದು, ಹುಲಿಕಲ್ ಘಾಟಿ ಕಡೆಯಿಂದ ಹೊಸಂಗಡಿ ಕಡೆಗೆ ಕೋಣದ ಮರಿಗಳನ್ನು ಕಂಟೈನರ್ನಲ್ಲಿ ತುಂಬಿಕೊಂಡು ಬರುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಅಮಾಸೆಬೈಲು ಹೊಸಂಗಡಿ ಚೆಕ್ ಪೋಸ್ಟ್ ಬಳಿ ಕಂಟೈನರ್ ತಡೆದು ಆರೋಪಗಳನ್ನು ವಶಕ್ಕೆ ಪಡೆದು ಕೋಣದ ಮರಿಗಳನ್ನು ರಕ್ಷಣೆ ಮಾಡಿದ್ದಾರೆ.
ಕಂಟೈನರ್ನಲ್ಲಿ ಒಟ್ಟು 52 ಕೋಣ ಹಾಗೂ ಎಮ್ಮೆಗಳನ್ನು ಹಿಂಸ್ಮಾತಕವಾಗಿ ಕಟ್ಟಿ ಹಾಕಿ ತುಂಬಿ, ಮಾಂಸ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು. ಅಮಾಸೆಬೈಲು ಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
- Advertisement -