- Advertisement -
- Advertisement -
ವಿಟ್ಲ: ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ಸ್ (ರಿ) ವಿಟ್ಲ ಇದರ ಮಹಾಸಭೆ ಹಾಗೂ ನೂತನ ಸಮಿತಿ ರಚನೆ ಶ್ರೀ ಕಾಶೀ ಯುವಕ ಮಂಡಲದ ಸಭಾಭವನದಲ್ಲಿ ನಡೆಯಿತು.
ಈ ಸಭೆಯಲ್ಲಿ ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ಸ್ “ರಿ” ವಿಟ್ಲ ಇದರ ನೂತನ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ರಮೇಶ್ ಶಿವಾಜಿನಗರ, ಪ್ರಧಾನ ಕಾರ್ಯದರ್ಶಿಯಾಗಿ ಶಿವಪ್ಪ ನಾಯ್ಕ ಕುಳಾಯಿ, ಕೋಶಧಿಕಾರಿಯಾಗಿ ಇಸ್ಮಾಯಿಲ್ ಕೆ.ಪಿ ಆಯ್ಕೆಯಾದರು.
ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಕಾನೂನು ಸಲಹೆಗಾರ ಪಧ್ಮನಾಭ ಪೂಜಾರಿ ವಕೀಲರು ಅಳಿಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಗೌರವಧ್ಯಕ್ಷ ರಾಮಣ್ಣ ವಿಟ್ಲ ಹಾಗೂ ಪದಾಧಿಕಾರಿಗಳು, ಆಟೋ ಚಾಲಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾನೂನು ಸಲಹೆಗಾರ ಪಧ್ಮನಾಭ ಪೂಜಾರಿ ಅಳಿಕೆ ಇವರಿಗೆ ಸಂಘದ ಪರವಾಗಿ ಸನ್ಮಾನಿಸಲಾಯಿತು.
- Advertisement -