- Advertisement -
- Advertisement -
ವಿಟ್ಲ: ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ಸ್ “ರಿ” ವಿಟ್ಲ ಇದರ 16ನೇ ಮಹಾಸಭೆಯು ಶ್ರೀ ಕಾಶೀ ಯುವಕ ಮಂಡಲದ ಸಭಾಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮವು ಸಂಘದ ಅಧ್ಯಕ್ಷ ತಾರಾನಾಥ, ಗೌರವಧ್ಯಕ್ಷ ರಾಮಣ್ಣ ವಿಟ್ಲ, ಕಾನೂನು ಸಲಹೆಗಾರ ಬಾಲಕೃಷ್ಣ ಇವರ ಉಪಸ್ಥಿಯಲ್ಲಿ ನಡೆಯಿತು. ಹಾಗೆಯೇ ಹಿರಿಯಾ ಚಾಲಕರಾದ ವಿಠಲ ಶೆಟ್ಟಿ, ಲಾಡಿಸ್ ಡಿಸೋಜ ಕನ್ಯಾನ, ಬಾಬುನಾಯ್ಕ, ಮೋಹನ್ ಬಂಗೇರ ಹಾಗೂ ಗೌರವ ಸಲಹೆಗಾರ ಬಾಲಕೃಷ್ಣ ಇವರಿಗೆ ಸನ್ಮಾನಿಸಲಾಯಿತು.
ಈ ಸಭೆಯಲ್ಲಿ ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರವರ್ಸ್ ಯೂನಿಯನ್ಸ್ “ರಿ” ವಿಟ್ಲ ಇದರ ನೂತನ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ರಮೇಶ್ ಶಿವಾಜಿನಗರ, ಪ್ರಧಾನ ಕಾರ್ಯದರ್ಶಿಯಾಗಿ ಶಿವಪ್ಪ ನಾಯ್ಕ ಕುಳಾಯಿ, ಕೋಶಧಿಕಾರಿಯಾಗಿ ಇಸ್ಮಾಯಿಲ್ ಕೆ.ಪಿ, ಉಪಾಧ್ಯಕ್ಷರಾಗಿ ಅಶೋಕ, ಲಕ್ಷ್ಮಣ ನಾಯ್ಕ, ಜತೆ ಕಾರ್ಯದರ್ಶಿಯಾಗಿ ಹರೀಶ ಅಳಿಕೆ, ಚಂದ್ರಶೇಖರ್ ವಿಟ್ಲ ಹಾಗೂ 10ಜನರ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಯಿತು.
- Advertisement -