ವಿಟ್ಲ : ಬಿಜೆಪಿ ಮಹಾ ಶಕ್ತಿ ಕೇಂದ್ರ ವಿಟ್ಲ ಇದರ 03 ನೇ ಬೂತ್ ಅಧ್ಯಕ್ಷರಾದ ಕೃಷ್ಣ ಮುದೂರು ಚಂದಳಿಕೆ ಅವರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮವು ನಡೆಯಿತು.
ಬಿಜೆಪಿ ರಾಜ್ಯ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅವರ ಮಾರ್ಗದರ್ಶನದಲ್ಲಿ, ಮಾನ್ಯ ಪುತ್ತೂರು ಶಾಸಕ ಶ್ರೀ ಸಂಜೀವ ಮಠ0ದೂರು ಹಾಗೂ ಜಿಲ್ಲಾ ಪ್ರಮುಖರು ಮಂಡಲ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಪ್ರಮುಖರು ಭಾಗವಹಿಸಿದ್ದರು ಬಿಜೆಪಿ ಹಿತೈಷಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಅಂತೆಯೇ 15 ರ ಬೂತ್ ಅಧ್ಯಕ್ಷ ತಿರುಮಲೇಶ್ವರ, 14ರ ಲೋಕಾನಂದ, 10ರ ವಸಂತ ಕುಲಾಲ್, 12ರ ಪುರಂದರ, 13ರ ತನಿಯಪ್ಪ ಮೂಲ್ಯ, 8ರ ಮೋಹನ್ ಕಟ್ಟೆ, 5ರ ಜಗದೀಶ್ ಅನ್ನಮೂಲೆ, 7ರ ಶಿಶಿಲ್ ಅನಿಲಕಟ್ಟೆ, 17ರ ಹೇಮಚಂದ್ರ, 16ರ ಸತೀಶ್ ಕಲ್ಲೇಗ, 4ರ ಭೋಜರಾಜ್, 6ರ ರಾಜೇಶ್ ಕೊಡಿಂಜ, 16ರ ಪುರುಷೋತ್ತಮ ಕಮಟ, 1 ರ ಹರೀಶ್ ಕೈಂತಿಲ, 9ರ ಹರೀಶ್ ಪಳೇರಿ, 2ರ ಹರೀಶ್ ಕಟ್ಟೆ ಅವರ ಮನೆಗೆ ಆಗಮಿಸಿ ನಾಮ ಫಲಕ ಅಳವಡಿಸಿದರು. ಈ ವೇಳೆ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಜೊತೆಗಿದ್ದರು.